ಭಟ್ಕಳ: ನಿಜಕ್ಕೂ ಭಟ್ಕಳ ತಾಲೂಕು ಬೆಚ್ಚಿ ಬಿದ್ದಿದೆ. ತಾಲೂಕಿನ ಹಾಡವಳ್ಳಿ ಗ್ರಾಮದಲ್ಲಿ ಹಾಡಹಗಲೇ ಒಂದೇ ಕುಟುಂಬದ ನಾಲ್ವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಇಡಿ ಇಡಿಯಾಗಿ ನಾಲ್ವರನ್ನು ಬಲಿ ಪಡೆಯಲಾಗಿದೆ. ಹೀಗಾಗಿ, ಆ ಪ್ರದೇಶದಲ್ಲಿ ಈಗ ರಕ್ತ ಸಿಕ್ತ ಹೆಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಹಾಡವಳ್ಳಿ ಗ್ರಾಮದ ಶಂಭು ಹೆಗಡೆ (65) ಆತನ ಪತ್ನಿ ಮಾದೇವಿ ಹೆಗಡೆ (40) ಮಗ ರಾಜೀವ್ ಹೆಗಡೆ (34) ಕುಸುಮಾ ಹೆಗಡೆ (30) ಕೊಲೆಯಾದ ದುರ್ದೈವಿಗಳಾಗಿದ್ದಾರೆ. ಇನ್ನು ಶವಗಳು ಮನೆಯ ಹೊರಗಡೆ ದಿಕ್ಕಿಗೊಂದರಂತೆ ಬಿದ್ದಿವೆ. ಭಯಾನಕವಾಗಿದೆ‌.

ಆಸ್ತಿ ವಿಚಾರಕ್ಕಾ..?
ಯಸ್, ಇಂತಹದ್ದೊಂದು ಅನುಮಾನ ಈಗ ಭಟ್ಕಳ ಪೊಲೀಸರಿಗೆ ಬಂದಿದೆ. ಯಾಕಂದ್ರೆ, ಇಷ್ಟೊಂದು ಕ್ರೂರವಾಗಿ ಹತ್ಯೆ ಮಾಡಿರೋ ಹಿಂದೆ ಆಸ್ತಿ ವಿವಾದ ಕಾರಣವಾಗಿದೆ ಎನ್ನಲಾಗಿದೆ. ಆದ್ರೆ, ಕೊಲೆ ಮಾಡಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಬದುಕಿತು ಪುಟ್ಟ ಕಂದಮ್ಮ..!
ಇನ್ನು ಪ್ರಕರಣದಲ್ಲಿ ಇಡೀ ಕುಟುಂಬವನ್ನೇ ನಿರ್ನಾಮ ಮಾಡಲು ಬಂದಿದ್ದ ಆಗಂತುಕನ ಕೈಯಿಂದ ಪುಟ್ಟ ಹೆಣ್ಣು ಮಗು ಬಚಾವ್ ಆಗಿದೆ. ಕಾರಣ ಆ ಮಗು ಅಂಗನವಾಡಿಗೆ ಹೋಗಿತ್ತು. ಹೀಗಾಗಿ, ಪಾಪ ಪುಟ್ಟ ಕಂದಮ್ಮ‌ಮನೆಗೆ ಬರುವಷ್ಟರಲ್ಲಿ ಇಡೀ ಕುಟುಂಬವನ್ನೇ ಕಳೆದುಕೊಂಡು ಅಕ್ಷರಶಃ ಅನಾಥವಾಗಿದೆ.

ಇತಿಹಾಸದಲ್ಲೇ ಮೊದಲಾ..?
ಅಸಲು, ಇವತ್ತು ಹಾಡಹಗಲೇ ಭಟ್ಕಳದ ಹಾಡವಳ್ಳಿಯಲ್ಲಿ ನಡೆದಿರೋ‌ ಭಯಾನಕ ಮರ್ಡರ್ ಇಡೀ ಉತ್ತರ ಕನ್ನಡದ ಇತಿಹಾಸದಲ್ಲೇ ಮೊದಲು ಎನ್ಮುವಂತಾಗಿದೆ. ಯಾಕಂದ್ರೆ, ಇಷ್ಟರಮಟ್ಟಿಗೆ ಇದುವರೆಗೂ ಯಾವುದೇ ಕೊಲೆಗಳಾಗಿರಲಿಲ್ಲ. ಒಂದೇ ಟೈಮಿನಲ್ಲಿ ಇಡೀ ಕುಟುಂಬದ ನಾಲ್ಕು ಜನರ ಹತ್ಯೆಯಾಗಿದೆ ಅಂದ್ರೆ ಇಡೀ ಜಿಲ್ಲೆಯ ಜನ ಥರಗುಟ್ಟಿ ಹೋಗಿದ್ದಾರೆ.

ಸ್ಥಳಕ್ಕೆ ಭಟ್ಕಳ ಪೊಲೀಸರು ದೌಡಾಯಿಸಿದ್ದಾರೆ. ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

error: Content is protected !!