ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗಾಗಿ ಒತ್ತಾಯ, ಶಿಗ್ಗಾವಿ ವಕೀಲರಿಂದ ಕೋರ್ಟ್ ಕಲಾಪ ಬಹಿಷ್ಕರಿಸಿ ಆಕ್ರೋಶ..!

ಶಿಗ್ಗಾವಿ: ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗಾಗಿ ಇಂದು ಶಿಗ್ಗಾವಿ ತಹಶೀಲ್ದಾರ ಕಛೇರಿಯಲ್ಲಿ ಶಿಗ್ಗಾವಿ ವಕೀಲರ ಸಂಘದಿಂದ ಒಂದು ದಿನ ಕೋರ್ಟ್ ಕಲಾಪದಿಂದ ದೂರ ಉಳಿದು ತಹಶೀಲ್ದಾರರಿಗೆ ಮನವಿ ನೀಡಿ ಸರಕಾರಕ್ಕೆ ಒತ್ತಾಯಿಸಿದರು.

ಕೋರ್ಟ್ ನಿಂದ ಘೋಷಣೆ ಕೂಗುತ್ತ ಆಗಮಿಸಿದ ವಕೀಲರು ತಹಶಿಲ್ದಾರ ಸಂತೋಷ ಹಿರೇಮಠ ಅವರಿಗೆ ಮನವಿ ಅರ್ಪಿಸಿದರು.

ಈ ಸಂದರ್ಭದಲ್ಲಿ ವಕೀಲರಾದ ಜಿ.ಎಸ್. ಅಂಕಲಕೋಟಿ, ಕೃಷ್ಣ ಎಸ್. ಜೋಷಿ, ಕೆ. ಎನ್. ಹುತ್ತನಗೌಡ್ರ, ಕೆ.ಎಸ್. ಪಾಟೀಲ, ಎಂ. ಎಚ್. ಬೆಂಡಿಗೇರಿ, ವಿ. ಕೆ. ಕೊಣಪ್ಪನವರ, ಬಿ. ಜಿ. ಕೂಲಿ, ವಿ. ಎಸ್. ನಲವಾಲ, ಬಿ. ಎನ್. ಕೊಣನವರ, ಎಂ. ಎನ್. ಕ್ಯಾಲಕೊಂಡ, ಎ. ಎ. ಗಂಜೇನವರ, ಎಸ್. ಎಸ್. ಪೂಜಾರ, ಎಂ. ಜಿ. ವಿಜಾಪೂರ, ಎಸ್. ಬಿ. ಲಕ್ಕಣ್ಣವರ, ಬಿ. ಕೆ. ಮತ್ತಿಗಟ್ಟಿ, ಎಸ್. ಜಿ. ಟೋಪಣ್ಣವರ, ಕೆ. ಎಸ್. ಧರ್ಮಪ್ಪನವರ, ಎಸ್. ಜಿ. ಅಂಕಲಕೋಟಿ, ವಿ. ಸಿ. ಪಾಟೀಲ, ಬಿ. ಜಿ. ರಾಗಿ, ವಿ. ಸಿ. ಪಾಟೀಲ, ಪಿ. ಪಿ. ಹೊಂಡದಕಟ್ಟಿ, ಆರ್. ಆರ್. ಡಾನಗಲ್, ಪಿ. ಐ. ಬಡಿಗೇರ, ಎಸ್. ಎಂ. ಕಮ್ಮಾರ, ಜಿ. ಎನ್. ಯಲಿಗಾರ, ಪಿ. ಎಂ. ಗಿರ್ಜಿ, ಎನ್. ಎಂ. ಪವಾರ, ಕೆ. ಎನ್. ಭಾರತಿ, ವಿ. ಎಂ. ರಾಮಗೇರಿ ಸೇರಿದಂತೆ ಇತರ ವಕೀಲರು ಇದ್ದರು.