ಇಂದೂರು ಕೊಪ್ಪ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಹೆಸ್ಕಾಂ ಸಿಬ್ಬಂದಿಗೆ ಗಾಯ, ಕಿಮ್ಸ್ ಗೆ ರವಾನೆ.!

ಮುಂಡಗೋಡ ತಾಲೂಕಿನ ಇಂದೂರು ಹಾಗೂ ಕೊಪ್ಪ ನಡುವೆ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರನಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.

ಹೆಸ್ಕಾಂ ನಲ್ಲಿ ಕಾರ್ಯನಿರ್ವಹಿಸುತ್ತಿರೊ ಬೆಳಗಾವಿ ಮೂಲದ ಮಂಜುನಾಥ್ ದಡ್ಡಿ ಎಂಬುವವನೇ ಗಾಯಗೊಂಡ ಬೈಕ್ ಸವಾರನಾಗಿದ್ದಾನೆ. ಇಂದು ಈತ ಬೈಕ್‌ ಮೇಲೆ ಬರುತ್ತಿದ್ದಾಗ, ಕೊಪ್ಪ ಬಳಿಯಲ್ಲಿ ಸ್ಕಿಡ್ ಆಗಿ ಬಿದ್ದಿದೆ. ಹೀಗಾಗಿ, ತಲೆಗೆ, ಹಾಗೂ ಮುಖಕ್ಕೆ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ.

ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಗಾಯಾಳುವನ್ನು ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ‌. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!