ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಗೆ ಮತ್ತೆ ಜೀವ ಬಂದಂತಾಗಿದೆ. ಬಿಜೆಪಿಯ ಎರಡೇರಡು ಪ್ರಭಾವಿಗಳು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಮಾಜಿ ಶಾಸಕ ವಿ.ಎಸ್.ಪಾಟೀಲ್ ಬಿಜೆಪಿ ತೊರೆದು ಕೈ ಹಿಡಿದಿದ್ದಾರೆ. ನಿನ್ನೆಯಷ್ಟೇ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಮುಖಂಡರ ಸಮ್ಮುಖದಲ್ಲೇ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಹೀಗಾಗಿ, ಕಾಂಗ್ರೆಸ್ ಸೇರ್ಪಡೆಗೊಂಡು ಇವತ್ತು ಮೊದಲ ಬಾರಿಗೆ ಮುಂಡಗೋಡಿಗೆ ಬಂದಿಳಿದಿದ್ದಾರೆ. ಹೀಗಾಗಿ, ಮುಂಡಗೋಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಜೋರಾಗಿದೆ.

ಕೇಸರಿ ಧ್ವಜ, ಕೇಸರಿ ಶಾಲು..!
ಅಂದಹಾಗೆ, ಪಟ್ಟಣದ ಶಿವಾಜಿ ಸರ್ಕಲ್ ಗೆ ವಿ.ಎಸ್.ಪಾಟೀಲ್ ಬಂದಿಳಿದರು. ಈ ವೇಳೆ ಅವ್ರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ಜಯಘೋಷ ಕೂಗಿ ಕೇಕೆ ಹಾಕಿದ್ರು. ಹೂವಿನ ಹಾರಗಳೊಂದಿಗೆ ವಿ.ಎಸ್.ಪಾಟೀಲರಿಗೆ ಭರ್ಜರಿ ಸ್ವಾಗತ ಕೋರಿದ್ರು. ಇನ್ನು ವಿಶೇಷ ಅಂದ್ರೆ ಕೇಸರಿ ಶಾಲು, ಕೇಸರಿ ಪೇಟ ತೊಡಿಸಿ ಜಯಘೋಷ ಮೊಳಗಿಸಿದ್ರು. ಮೆರವಣಿಗೆ ಮೂಲಕ ಪಾಟೀಲರಿಗೆ ಸ್ವಾಗತ ಕೋರಿದ್ರು.

 

error: Content is protected !!