ಮುಂಡಗೋಡ: ಯಲ್ಲಾಪುರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದ್ರೊಂದಿಗೆ, ಬರುವ ವಿದಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಲ್ಲಿ ಭರ್ಜರಿ ಕಾದಾಟ ಪಕ್ಕಾ ಎನ್ನುವಂತಾಗಿದೆ. ಅದ್ರ ಜೊತೆ ಇಂದು ತಾಲೂಕಿನ ನ್ಯಾಸರ್ಗಿಯ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಅನಾಮಿಕ ಅಭಿಮಾನಿಯೊಬ್ಬರು, ಪಾಟೀಲರ ಹೆಸರಲ್ಲಿ ಅರ್ಚನೆ ಮಾಡಿಸುವಂತೆ ಚೀಟಿ ಬರೆದಿಟ್ಟು ಹೋಗಿದ್ದಾರೆ‌.

ಗುರುವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ನ್ಯಾಸರ್ಗಿಯ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಅಯ್ಯಪ್ಪ ಸ್ವಾಮಿಯ ಎದುರು ಹಣ್ಣು, ತೆಂಗಿನಕಾಯಿ, ಕರ್ಪೂರ, ಊದಬತ್ತಿ ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಸಮರ್ಪಿಸಿದ್ದಾರೆ. ಜೊತೆಗೆ ಚೀಟಿಯೊಂದನ್ನು ಬರೆದಿಟ್ಟು ವಿ.ಎಸ್.ಪಾಟೀಲರ ಹೆಸರಲ್ಲಿ ಅಯ್ಯಪ್ಪ ಸ್ವಾಮಿಗೆ ಅರ್ಚನೆ ಮಾಡುವಂತೆ ಮನವಿ ಮಾಡಲಾಗಿದೆ.

ಆದ್ರೆ, ಹಾಗೆ ಅರ್ಚನೆಗಾಗಿ ಹಣ್ಣು ಕಾಯಿ ಇಟ್ಟು ಹೋಗಿರೋರು ಯಾರು ಅಂತಾ ಗೊತ್ತಾಗಿಲ್ಲ. ಹೀಗಾಗಿ, ವಿ.ಎಸ್.ಪಾಟೀಲರ ಅನಾಮಿಕ ಅಭಿಮಾನಿಯ ಹಣ್ಣು ಕಾಯಿಗಳನ್ನು ಸ್ವಾಮಿಗೆ ಅರ್ಪಿಸಲಾಗಿದೆ ಅಂತಾ ತಿಳಿದು ಬಂದಿದೆ.

error: Content is protected !!