ಮುಂಡಗೋಡ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ತಾಲೂಕಾ ಘಟಕದ ವತಿಯಿಂದ ಇಲ್ಲಿನ ಶಿವಾಜಿ ವೃತ್ತದಲ್ಲಿ ಕನ್ನಡ ದ್ವಜಾರೋಹಣ ನೆರವೇರಿಸಲಾಯಿತು. ಮುಂಡಗೋಡ ಪಿಐ ಸಿದ್ದಪ್ಪ ಸಿಮಾನಿ ದ್ವಜಾರೋಹಣ ನೆರವೇರಿಸಿ ಮಾತನಾಡಿದ್ರು.

ವಿವಿಧ ರಾಜ್ಯದೆಡೆಯಿಂದ ಬಂದ ಪ್ರತಿಯೊಬ್ಬರೂ ಈ ನಾಡಿನ ಋಣ ತೀರಿಸುವ ಕೆಲಸ ಮಾಡಬೇಕಿದೆ ಇಲ್ಲಿ ದೊರಕುವ ಶಾಂತಿ ಸಂಹಿತೆ ದೇಶದ ಇತರೆ ಕಡೆ ಕಾಣಸಿಗುವುದಿಲ್ಲ ಎಂದ ಅವರು, ತಾಲೂಕಿಗೆ ನೂತನವಾಗಿ ಆಗಮಿಸಿರುವ ಪ್ರವೀಣ ಶೆಟ್ಟಿ ಬಣದಿಂದ ಹೆಚ್ಚಿನದನ್ನು ನಿರೀಕ್ಷಿಸಲಾಗಿದೆ ನ್ಯಾಯಕ್ಕಾಗಿ ಬಡವರ ಪರವಾಗಿ ಹೋರಾಡಿ ಭ್ರಷ್ಟತೆ ಹೋಗಲಾಡಿಸಲು ಪಣ ತೊಡಲು ಕರೆ ನೀಡಿದ್ರು.

ಈ ವೇಳೆ ದಲಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಜಗದೀಶ ದೈವಜ್ಞ, ನಿವೃತ್ತ ಶಿಕ್ಷಕ ಬಸವರಾಜ ಹೂಗಾರ, ನಿವೃತ್ತ ಶಿರಸ್ತೇದಾರ್ ತಳವಾರ, ಸಂಗಮೇಶ್ವರ್ ಸೊಸೈಟಿ ಅಧ್ಯಕ್ಷ ಸಂಗಮೇಶ್ವರ್ ಕೋಳೂರ, ರಕ್ಷಣಾ ವೇದಿಕೆ ರೈತ ಘಟಕದ ಅಧ್ಯಕ್ಷ ರಾಮುಗೌಳಿ, ಸಂಘಟನಾ ಕಾರ್ಯದರ್ಶಿ ಮಣಿಕಂಠ ಶೇಟ್, ಸದಸ್ಯ ವಿರೂಪಾಕ್ಷ ಸಾಗರ, ಅಭಿಷೇಕ್ ದಾಮೋದರ್, ಅರ್ಜುನ್ ಕಾಳೆನವರ್, ಸಾಯಿ ಲಮಾಣಿ, ನಿರಂಜನ್ ವೇರ್ಣೇಕರ್, ಕಿರಣ ಕಾಮದೇನು, ಸಂತೋಷ ಸಾನು, ಪ್ರಕಾಶ ಗೌಳಿ, ಯುವರಾಜ, ಕುಮಾರ ಬಂಗೇರ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!