ಮುಂಡಗೋಡ ತಾಲೂಕಿನಲ್ಲಿ ಹಿಂದು ಮುಸ್ಲಿಂ ಭಾವೈಕ್ಯತೆಯ ಮೊಹರಂ ಸಂಭ್ರಮ..!


ಮುಂಡಗೋಡ: ತಾಲೂಕಿನಾಧ್ಯಂತ ಮೊಹರಂ ಹಬ್ಬದ ಕೊನೆಯ ದಿನದ ಸಂಭ್ರಮ ಜೋರಾಗಿದೆ. ಕಳೆದ ಐದು ದಿನಗಳಿಂದ ತಾಲೂಕಿನಾಧ್ಯಂತ ಹಿಂದು ಮುಸ್ಲಿಂ ಬಾಂಧವರು ಭಾವೈಕ್ಯತೆಯ ಮೊಹರಂ ಆಚರಿಸುತ್ತಿದ್ದಾರೆ. ಬುಧವಾರ ಮೊಹರಂ ಕೊನೆಯ ದಿನದ ಆಚರಣೆಯಾಗಿದೆ.

ಅಗ್ನಿ ಕುಂಡ..!
ತಾಲೂಕಿನೆಲ್ಲೆಡೆ ಮೊಹರಂ ಪಂಜಾಗಳನ್ನು ಪ್ರತಿಷ್ಟಾಪಿಸಿ ಇಂದು ವಿಸರ್ಜನೆ ನಡೆಯುತ್ತಿದೆ. ಹೀಗಾಗಿ, ಇಂದು ಬೆಳಿಗಿನ ಜಾವ ಅಗ್ನಿ ಕುಂಡ ರಚಿಸಿ ಪಂಜಾಗಳನ್ನು ಹೊತ್ತು ಕೆಂಡ ತುಳಿಯಲಾಯಿತು. ಆ ನಂತರದಲ್ಲಿ ಪಂಜಾಗಳ‌ ಮೆರವಣಿಗೆ ನಡೆಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪಂಜಾಗಳಿಗೆ ಗ್ರಾಮಸ್ಥರು ಸಕ್ಕರೆ ಬೆಲ್ಲ ನೀಡಿ, ದರ್ಶನ ಪಡೆದ್ರು.

ಅಲ್ಲಾವಿ ಕುಣಿತ..!
ಇ‌ನ್ನು ಸಾಂಪ್ರದಾಯಿಕವಾಗಿ ವಿಶೇಷ ಅಲ್ಲಾವಿ ಹೆಜ್ಜೆ ಕುಣಿತ ಆಕರ್ಷಕವಾಗಿತ್ತು. ಅಂದಹಾಗೆ ಹಿಂದೂ‌ ಮುಸ್ಲಿಂ ಭಾವೈಕ್ಯತೆಗೆ ಕೊಂಡಿಯಾಗಿರೋ ಮೊಹರಂ ಹಬ್ಬ ಹಿಂದುಗಳ ಪಾಲಿಗೆ “ಅಲ್ಲಬ್ಬ” ಅಂತಲೇ ಆಚರಣೆಯಾಗತ್ತೆ. ಐದು ದಿನಗಳ ಕಾಲ ಸಂಭ್ರಮ ಜೋರಾಗಿರತ್ತೆ. ಕೊನೆಯ ದಿನದ ಹಬ್ಬಕ್ಕೆ ಇಂದು ಹಿಂದುಗಳು ವಿಶೇಷ ಖಾದ್ಯವಾದ ಚ್ಯೊಂಗ್ಯಾ ಮಾಡಿ ನೈವೇದ್ಯ ಅರ್ಪಿಸುವ ಪದ್ದತಿಯಿದೆ.

error: Content is protected !!