25 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿ, ಇಂದೂರ ಸೊಸೈಟಿಯ ಸಿಬ್ಬಂದಿ ವಸಂತ್ ವರೂರ್ ಗೆ ಬೀಳ್ಕೊಡುಗೆ..!

ಮುಂಡಗೋಡ: ತಾಲೂಕಿನ ಇಂದೂರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸಿ, ನಿವೃತ್ತಿಯಾಗಿರೋ ಸಿಬ್ಬಂದಿ ವಸಂತ ವರೂರವರಿಗೆ ಇ‌ಂದು ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಬೀಳ್ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ರು.

ವಸಂತ ವರೂರ ದಂಪತಿಗೆ ಶಾಲು ಹೊದಿಸಿ, ಹಾರ ಹಾಕಿ ಫಲ ಪುಷ್ಪ ನೀಡಿ ಸನ್ಮಾನಿಸಿದ ಆಡಳಿತ ಮಂಡಳಿ ಸದಸ್ಯರು, ನೆನಪಿನ ಕಾಣಿಕೆ ನೀಡಿ ವಸಂತ್ ವರೂರರವರ ಸೇವೆಯನ್ನು ಶ್ಲಾಘಿಸಿದ್ರು. ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದ್ರು.

error: Content is protected !!