ನಂದಿಕಟ್ಟಾ ಸೊಸೈಟಿಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ..!

ಮುಂಡಗೋಡ ತಾಲೂಕಿನ ನಂದಿಕಟ್ಟಾ ಸೊಸೈಟಿಯ ನೂತನ ಅಧ್ಯಕ್ಷರಾಗಿ ಸುಧಾಕರ್ ಮೋರೆ,
ಉಪಾಧ್ಯಕ್ಷರಾಗಿ ಬಸವಣ್ಣೆವ್ವ ಶಿವಪುತ್ರಪ್ಪ ಅಗಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಸೊಸೈಟಿ ನಿರ್ದೇಶಕರ ಮಧ್ಯ ನಡೆದ ಒಪ್ಪಂದದಂತೆ,ನಿಕಟ ಪೂರ್ವ ಅಧ್ಯಕ್ಷ ತುಕಾರಾಮ್ ಔಂಡೋಜಿ ಒಂದು ತಿಂಗಳ ಹಿಂದೆ ರಾಜೀನಾಮೆ ನೀಡಿದ್ದರಿಂದ ಇಂದು ಚುನಾವಣೆ ಘೋಷಣೆ ಮಾಡಲಾಗಿತ್ತು, ಹಾಗಾಗಿ ಇಂದು ಸೊಸೈಟಿ ಹಾಲ್ ನಲ್ಲಿ ನಡೆದ ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿಯಾಗಿ, ಸುಧಾಕರ್ ಮೋರೆ ಅಧ್ಯಕ್ಷರಾಗಿ, ಬಸವಣ್ಣೆವ್ವ ಶಿವಪುತ್ರಪ್ಪ ಅಗಡಿ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

ಚುನಾವಣಾಧಿಕಾರಿಯಾಗಿ, ಶಿರಸಿಯ ಸಹಕಾರಿ ಸಂಘದ ಕ್ಷೇತ್ರ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗುಡಿಕೇರಿ ಕಾರ್ಯ ನಿರ್ವಹಿಸಿದರು. ಈ ವೇಳೆ ಸೊಸೈಟಿಯ ಕಾರ್ಯದರ್ಶಿಯಾದ ಅರ್ಜುನ ಪುರದವರ, ಹಾಗೂ ಸಿಬ್ಬಂದಿಗಳು, ಕಮೀಟಿಯ ನಿರ್ದೇಶಕರು, ಗ್ರಾಮ ಪಂಚಾಯತ್ ಸದ್ಯಸರಾದ ರಮೇಶ್ ನೇಮಣ್ಣನವರ, ಸಂತೋಷ ಬೋಸಲೆ, ಪರಶುರಾಮ್ ಕಬ್ಬೆರ್ ಊರಿನ ಪ್ರಮುಖರಾದ ಕಲ್ಲನಗೌಡ್ರ, ಪರಶುರಾಮ್ ಮೆಂತೆಕಾರ್, ನಿಂಗಣ್ಣ ಕವಟೆ, ಸೋಮಲಿಂಗ ಕಾಂಬಳೆ, ಮಂಜುನಾಥ್ ಮೋರೆ, ಕೇದಾರಿ ಮುಗಳಿ, ಸುರೇಶ ಕಮ್ಮಾರ್, ಸುಧೀರ್ ಕಾಂಬಳೆ, ಶಿವಾಜಿ ಶೇಕಾಯಿ, ಲಾಲಸಾಬ ದುಂಡಸಿ, ನಬಿಸಾಬ ಮಿಶ್ರಕೋಟಿ, ಉಪಸ್ಥಿತರಿದ್ದರು.

error: Content is protected !!