ಮುಂಡಗೋಡಿನ ಆನಂದ್ ಕಡಗಿ ಕಣ್ಮರೆ, ಅಷ್ಟಕ್ಕೂ CCTV ದೃಷ್ಯದಲ್ಲಿ ಕಂಡದ್ದು ಏನು..?

ಮುಂಡಗೋಡಿನ ಶಿಕ್ಷಕ ಆನಂದ್ ಕಡಗಿ ನಾಪತ್ತೆಯಾಗಿದ್ದಾರೆ. ರವಿವಾರ ದಿ.29 ರಂದು ಬೆಳಿಗ್ಗೆ 11 ಗಂಟೆಯಷ್ಟೊತ್ತಿಗೆ ಬರಿಗಾಲಲ್ಲೇ ಮನೆ ಬಿಟ್ಟು ಹೋಗಿರೋ ಆನಂದ್, ಹಸಿರು ಬಣ್ಣದ ಸಿಮೆಂಟ್ ಕಂಪನಿ ಹೆಸರಿರೋ ಟೀಶರ್ಟ್, ಹಾಗೇ ಖಾಕಿ ಬಣ್ಣದ ತ್ರಿಪೋರ್ಥ್ ತೊಟ್ಟು ಉಟ್ಟುಡುಗೆಯಲ್ಲೇ ನಾಪತ್ತೆಯಾಗಿದ್ದಾರೆ. ಮೊಬೈಲ್, ಪರ್ಸ್ ಏನು ಅಂದ್ರೆ ಏನೂ ತೆಗೆದುಕೊಂಡು ಹೋಗಿಲ್ಲ. ಹೀಗಾಗಿ, ಕುಟುಂಬದವರು ಆತಂಕಗೊಂಡಿದ್ದಾರೆ.

ಸಿಸಿಟಿವಿಯಲ್ಲಿ..!
ಅಸಲು, ಆನಂದ್ ಕಡಗಿ ರವಿವಾರ ಬೆಳಿಗ್ಗೆ ಮಕ್ಕಳನ್ನು ಸಲೂನ್ ಶಾಪ್ ಗೆ ಕರೆದುಕೊಂಡು ಹೋಗಿ ಬಂದಿದ್ದರು. ತಾವೂ ಕೂಡ ಕಟ್ಟಿಂಗ್ ಮಾಎಇಸಿಕೊಂಡು ಬಂದಿದ್ರು. ಆ ನಂತರ ಮಕ್ಕಳಿಗೆ ಸ್ನಾನ ಮಾಡಿಸಲು ಮನೆಯವರು ಒಳಗಡೆ ಹೋದಾಗ, 11ಗಂಟೆಯ ಹೊತ್ತಿಗೆ ಮನೆಯಿಂದ ಹೊರಟವರು, ಸಮಾಜ ಕಲ್ಯಾಣ ಇಲಾಖೆಯ ಎದುರೇ ಹಾದು ಹೋಗಿದ್ದಾರೆ. ಅಲ್ಲಿನ ಸಿಸಿಟಿವಿಯಲ್ಲಿ ಆತ ಏಕಾಂಗಿಯಾಗಿ ನಡೆದುಕೊಂಡು ಹೋಗ್ತಿರೋ ದೃಷ್ಯ ಸೆರೆಯಾಗಿದೆ. ಅದೇನೋ ಧಾವಂತದಲ್ಲಿ ಹೋಗುವ ಹಾಗೂ ಕಂಡಿಲ್ಲ. ಸ್ವಾಭಾವಿಕವಾಗಿ ನಿರ್ಲಿಪ್ತ ಹೆಜ್ಜೆಗಳು ಆ ದೃಷ್ಯದಲ್ಲಿ ಕಾಣತ್ತೆ‌. ಆ ದೃಷ್ಯ ಕಂಡರೆ ಬಹುತೇಕ ಸ್ವಾಭಾವಿಕ ಭಾವನೆಗಳೇ ಇದೆ. ಹೀಗಾಗಿ, ಆನಂದ ಕಡಗಿ ಕಣ್ಮರೆಯಾಗಿರೋದು ಅಚ್ಚರಿಯಾಗಿದೆ.

ಸ್ನೇಹಿತರ ಬಳಗದಿಂದ ಶೋಧ..!
ಅಂದಹಾಗೆ, ಆನಂದ್ ಕಡಗಿ ಮೃದುಮನಸ್ಸಿನ ಸ್ನೇಹಜೀವಿ, ಮುಂಡಗೋಡಿನಲ್ಲಿ ಅಪಾರ ಸ್ನೇಹಿತರ ಬಳಗ ಹೊಂದಿದ್ದಾರೆ. ಹೀಗಾಗಿ, ತಮ್ಮ ಆತ್ಮೀಯ ಸ್ನೇಹಿತ ಕಾಣೆಯಾಗಿರೋ ಬಗ್ಗೆ ಸ್ನೇಹ ಬಳಗ ಆತಂಕಗೊಂಡಿದೆ. ಹಾವೇರಿ, ಹುಬ್ಬಳ್ಳಿ ಧಾರವಾಡ, ಯಲ್ಲಾಪುರ ಸೇರಿ ಹಲವು ಕಡೆ ಆನಂದ್ ಗಾಗಿ ಹುಡುಕಾಟ ನಡೆಸಿದ್ದಾರೆ. ಆದ್ರೆ, ಈ ಕ್ಷಣದವರೆಗೂ ಪತ್ತೆಯಾಗೋದಿರಲಿ, ಸಣ್ಣದೊಂದು ಸುಳಿವೂ ಸಿಕ್ಕಿಲ್ಲ. ಸ್ನೇಹಿತನಿಗಾಗಿ ಕಾಡು, ಮೇಡು ಅಲೆಯುತ್ತಿರೋ ಸ್ನೇಹಿತರು ಆನಂದ್ ಎಲ್ಲಾದ್ರೂ ಕಂಡ್ರೆ ಕೂಡಲೇ ಮಾಹಿತಿ ನೀಡುವಂತೆ ಹಲವು ಕಡೆ ಮನವಿ ಮಾಡಿ ಬಂದಿದ್ದಾರೆ.

ಗೆಳೆಯ ಆನಂದ್ ಬೇಗ ಬಾ..!
ನೀನು ಕಾಣದೇ ನಿನ್ನಿಡೀ ಕುಟುಂಬ ಆತಂಕದಲ್ಲಿದೆ.. ನಿನ್ನ ಪುಟ್ಟ ಕಂದಮ್ಮಗಳು ನಿನ್ನ ಬರುವಿಕೆಗಾಗಿ ಹಂಬಲಿಸ್ತಿವೆ. ನಿನ್ನ ಅಪಾರ ಸ್ನೇಹ ಬಳಗ ನಿನ್ನ ಒಂದು ಮಾತಿಗಾಗಿ ಕಾದು ಕುಳಿತಿದೆ. ಅದೇಲ್ಲೇ ಇದ್ದರೂ ಬೇಗ ಬಾ ಗೆಳೆಯ.‌. ನೀ ಎಲ್ಲೇ ಇದ್ದರೂ ಅಲ್ಲಿಂದಲೇ ಒ‌ಂದು ಕಾಲ್ ಆದ್ರೂ ಮಾಡು..! ಇದು ನಿನ್ನವರ ಮನದಾಳದ ಮನವಿ..

error: Content is protected !!