ಗಣೇಶಪುರದಲ್ಲಿ ಮಟ್ಕಾ ಬರೆಯುತ್ತಿದ್ದ ವ್ಯಕ್ತಿ ಸೇರಿ, ಇಬ್ಬರ ಮೇಲೆ ಕೇಸ್ ದಾಖಲು..!

ಮುಂಡಗೋಡ: ತಾಲೂಕಿನ ಗಣೇಶಪುರ ಗ್ರಾಮದಲ್ಲಿ ಮುಂಡಗೋಡ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಮಟ್ಕಾ ಬರೆಯುತ್ತಿದ್ದ ವ್ಯಕ್ತಿ ಹಾಗೂ ಹಣ ಪಡೆಯುತ್ತಿದ್ದ ಮುಂಡಗೋಡಿನ ಮತ್ತೊಬ್ಬ ವ್ಯಕ್ತಿ ಸೇರಿ ಇಬ್ಬರ ಮೇಲೆ ಕೇಸು ದಾಖಲಿಸಿದ್ದಾರೆ.

ಗಣೇಶಪುರದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಗಂಗಾಧರ ನರಸಿಂಗಪ್ಪ ದರಪ್ಪನವರ ಎಂಬುವವನ ಮೇಲೆ ಕೇಸು ದಾಖಲಿಸಲಾಗಿದೆ‌. ಅಲ್ಲದೇ ಆರೋಪಿ ನೀಡಿದ ಮಾಹಿತಿಯಂತೆ ಮಟ್ಕಾದ ಹಣ ಪಡೆಯುತ್ತಿದ್ದ ಮುಂಡಗೋಡ ಶಿರಸಿ ರಸ್ತೆಯ ಪ್ರವೀಣ್ ಪಾಟೀಲ್ ಎಂಬುವವನ ಮೇಲೂ ಕೇಸ್ ದಾಖಲಾಗಿದೆ. ಇದ್ರೊಂದಿಗೆ 825 ರೂ. ನಗದು ಹಣ ಸೇರಿದಂತೆ ಮಟ್ಕಾ ಬರೆಯಲು ಬಳಸುತ್ತಿದ್ದ ಸಲಕರಣೆಗಳನ್ನ ವಶಕ್ಕೆ ಪಡೆಯಲಾಗಿದೆ. ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

 

error: Content is protected !!