ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದ ಯುವಕನ ಲವ್ ಕಹಾನಿ ಮತ್ತೆ ರಿಯಲ್ ಲೈಫ್ ಗೆ ಬಂದು ನಿಂತಿದೆ. ಟಿಕ್ ಟಾಕ್ ನಲ್ಲಿ ಶುರುವಾಗಿದ್ದ ಪ್ರೀತಿ ಮದುವೆಯ ಮೂರು ಗಂಟಿನೊಂದಿಗೆ ಬಾಂಧವ್ಯ ಬೆಸೆದುಕೊಂಡು ಅದೇನೋ ಮನಸ್ತಾಪಗಳು ತಪ್ಪು ಕಲ್ಪನೆಗಳಿಂದ ದೂರವಾಗಿದ್ದ ಒಂದೂವರೇ ವರ್ಷದ ಪ್ರೇಮ್ ಕಹಾನಿ ಮತ್ತದೇ ಹಳೆಯ ಪ್ರೀತಿಯ ಬಂಧನದಲ್ಲಿ ಬೆಸೆದುಕೊಂಡಿದೆ.

ಹಾಗಂತ ಮೊನ್ನೆಯಷ್ಟೇ ನೊಂದು ಮನದಾಳ ಬಿಚ್ಚಿಟ್ಟಿದ್ದ ಮಹಿಳೆ ಈಗ ತನ್ನ ಲೈಫು ಸರಿಯಾಯ್ತು ಕಣ್ರಿ ಅಂತಾ ಖುಶಿಯಿಂದಲೇ ಹೇಳಿಕೊಂಡಿದ್ದಾಳೆ.

ತಪ್ಪು ಕಲ್ಪನೆಗಳಾಗಿತ್ತು..!
ನನ್ನ ಪತಿ ಒಳ್ಳೆಯವನು, ನನಗೆ ಮೋಸ ಮಾಡಿಲ್ಲ. ನಾನೇ ಅವರನ್ನ ಹಾಗೆ ತಪ್ಪಾಗಿ ತಿಳಿದುಕೊಂಡಿದ್ದೆ. ಅವತ್ತು ನನ್ನ ಪತಿ ಊರಿಗೆ ಹೋದವರು ವಾಪಸ್ ಬರದೇ ಇದ್ದ ಕಾರಣ ನಾನು ತುಂಬಾ ಕುಗ್ಗಿ ಹೋಗಿ ಮಾನಸಿಕವಾಗಿ ನೊಂದು ಜರ್ಜರಿತಳಾಗಿದ್ದೆ ಹೀಗಾಗಿ, ಪೊಲೀಸ್ ಠಾಣೆಯ ಮೆಟ್ಟಿಲು ಏರಬೇಕಾಗಿತ್ತು. ಅಲ್ಲದೇ ತಮ್ಮ ಮಾದ್ಯಮದ ಮೂಲಕ ನನ್ನ ನೋವು ತೋಡಿಕೊಳ್ಳಬೇಕಾಯ್ತು. ಆದ್ರೆ ಈಗ ನಿಮ್ಮೇಲ್ಲರ ಸಹಕಾರದಿಂದ ನಾವು ಒಂದಾಗಿದ್ದೇವೆ ಅಂತಾ ಪಬ್ಲಿಕ್ ಫಸ್ಟ್ ನ್ಯೂಸ್ ಗೆ ಧನ್ಯವಾದ ತಿಳಿಸಿದ್ದಾಳೆ.

ಹಾಗಿದ್ರೆ ಆ ಮಹಿಳೆ ಈಗ ಹೇಳಿದ್ದಾದ್ರೂ ಏನು ಕೇಳಬೇಕಾ ಹಾಗಿದ್ರೆ ಈ ಕೆಳಗಿನ ಲಿಂಕ್ ಒತ್ತಿ👇👇https://youtu.be/ikDuS1XaFF8

error: Content is protected !!