ಮುಂಡಗೋಡ: ಪಟ್ಟಣಕ್ಕೆ ಇಂದು ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರಿಗೆ ಸಚಿವ ಶ್ರೀರಾಮುಲುರವರಿಗೆ ಭವ್ಯ ಸ್ವಾಗತ ಕೋರಲಾಯಿತು. ಜೊತೆಗೆ ಇದೇ ವೇಳೆ ಸಚಿವರು ಗಲಿಬಿಲಿಗೊಳ್ಳುವಂತಹ ಘಟನೆಯೂ ನಡೆಯಿತು.

ಸಾರಿಗೆ ಸಚಿವ ಶ್ರೀರಾಮುಲು ಮುಂಡಗೋಡ ಪಟ್ಟಣಕ್ಕೆ ಬಂದಿಳಿಯುತ್ತಿದ್ದಂತೆ, ಸಚಿವ ಶಿವರಾಮ್ ಹೆಬ್ಬಾರ್ ಶ್ರೀರಾಮುಲುರವರಿಗೆ ಸ್ವಾಗತಿಸಲು ಮುಂದಾಗಿದ್ರು. ಈ ವೇಳೆ ಸಚಿವ ಶ್ರೀರಾಮುಲುರಿಗೆ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಶಾಲು ಹೊದಿಸಿ ಹಾರ ಹಾಕಿ ನೆನಪಿನ ಕಾಣಿಕೆ ಕೊಟ್ಟು ಸ್ವಾಗತಿಸಿದ್ರು.

ಇದೇ ವೇಳೆ ಅಭಿಮಾನಿಗಳ ಮದ್ಯದಿಂದ “ಮುಂದಿನ ಮುಖ್ಯಮಂತ್ರಿ ಶ್ರೀರಾಮುಲುಗೆ ಜಯವಾಗಲಿ” ಅನ್ನೋ ಘೋಷಣೆ ಕೇಳಿ ಬಂತು. ಹೀಗಾಗಿ ಕೆಲಹೊತ್ತು ಸಚಿವ ಹೆಬ್ಬಾರ್ ಹಾಗೂ ಶ್ರೀರಾಮುಲು ಗಲಿಬಿಲಿಗೊಂಡ್ರು. ಹಾಗೆ ಘೋಷಣೆ ಕೂಗಿದ ವ್ಯಕ್ತಿಗೆ ಕೂಗದಂತೆ ನಿಲ್ಲಿಸಿದ್ರು. ಇದರ ಜೊತೆಗೆ ಸದ್ಯ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆಯ ಮಾತುಗಳ ನಡುವೆ, ಮುಂದಿನ ಸಿಎಂ ಬಗ್ಗೆ ಕೂಗುಗಳು ಏಳುತ್ತಿವೆಯಾ ಅನ್ನೋ ಪ್ರಶ್ನೆಯೂ ಎದ್ದಿದೆ.

error: Content is protected !!