ಮುಂಡಗೊಡ: ತಾಲೂಕಿನ ಬಡ್ಡಿಗೇರಿ ಕ್ರಾಸ್ ಬಳಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಟಾ ಎಸ್ ವಾಹನ ಚಾಲಕನ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಡಗೋಡ ಪೊಲೀಸರ ಖಡಕ್ ಕ್ರಮ..!
ಇನ್ನು ಟಾಟಾ ಎಸ್ ವಾಹನವು ಗೂಡ್ಸ್ ವಾಹನವಾಗಿದ್ದು, ಇದರಲ್ಲಿ ಸರಕನ್ನು ಮಾತ್ರ ಸಾಗಿಸಲು ಪರವಾನಿಗೆ ಇರುತ್ತದೆ. ಇದರಲ್ಲಿ ಸಾರ್ವಜನಿಕರನ್ನು ಕೂಡಿಸಿಕೊಂಡು ವಾಹನ ಚಲಾಯಿಸಿ ಅಪಘಾತ ಉಂಟಾದಲ್ಲಿ ಮೃತರ ಕುಟುಂಬಕ್ಕೆ ಹಾಗೂ ಗಾಯಾಳು ಕುಟುಂಬಕ್ಕೆ ವಿಮೆ ಇಲಾಖೆಯಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ಮತ್ತು ಚಾಲಕನ ಚಾಲನಾ ಪ್ರಮಾಣ ಪತ್ರ ಹಾಗೂ ವಾಹನ ನೊಂದಣಿ ಪ್ರಮಾಣ ಪತ್ರವು ಸಹಾ ರದ್ದಾಗುತ್ತದೆ. ಆದ್ದರಿಂದ ಮುಂಡಗೋಡ ತಾಲೂಕಿನ ಸಾರ್ವಜನಿಕರು ಸರಕು ವಾಹನದಲ್ಲಿ ಪ್ರಯಾಣ ಮಾಡಬಾರದೆಂದು ಹಾಗೂ ಗೂಡ್ಸ್ ವಾಹನ ಮಾಲೀಕರು ತಮ್ಮ ವಾಹನದಲ್ಲಿ ಯಾವುದೇ ಸಾರ್ವಜನಿಕರನ್ನು ಕೂಡಿಸಿಕೊಂಡು ಹೋಗಬಾರದೆಂದು ಮುಂಡಗೋಡ ಪೊಲೀಸ್ ಠಾಣೆಯಿಂದ ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.