ಮುಂಡಗೋಡ: ಶಿವಮೊಗ್ಗದಲ್ಲಿ ಹತ್ಯೆಗೀಡಾದ ಹಿಂದು ಯುವಕ, ಭಜರಂಗದಳ ಕಾರ್ಯಕರ್ತ ಹರ್ಷ ಸಾವಿಗೆ ಮುಂಡಗೋಡಿನ ಹಿಂದುಪರ ಸಂಘಟನೆಗಳು ತೀವ್ರ ಸಂತಾಪ ಸೂಚಿಸಿವೆ.

ಪಟ್ಟಣದ ಶಿವಾಜಿ ವೃತ್ತದಲ್ಲಿ ಮಂಗಳವಾರ ಸಂಜೆ ಹರ್ಷ ಭಾವಚಿತ್ರಕ್ಕೆ ವಿಶೇಷ ಗೌರವ ಸಲ್ಲಿಸಿದ್ರು. ಮೇಣದ ಬತ್ತಿ ಬೆಳಗಿಸಿ ಶೃದ್ಧಾಂಜಲಿ ಅರ್ಪಿಸಿದ್ರು. ಹಿಂದು ಕಾರ್ಯಕರ್ತನಿಗೆ ಚಿರಶಾಂತಿ ಸಿಗಲಿ ಅಂತಾ ಮೌನಾಚರಣೆ‌ ಮಾಡಿದ್ರು. ಶೀಘ್ರವೇ ಹತ್ಯೆಯ ಆರೋಪಿಗಳನ್ನು ಹೆಡೆಮುರಿ ಕಟ್ಟುವಂತೆ ಸರ್ಕಾರಕ್ಕೆ ಆಗ್ರಹಿಸಿದ್ರು. ಮತ್ತೊಮ್ಮೆ ಹುಟ್ಟಿ ಬಾ “ಹಿಂದು ಕಂದ” ಅಂತಾ ಹಾರೈಸಿದ್ರು‌. ಈ ವೇಳೆ ಮುಂಡಗೋಡಿನ ಹಿಂದು ಪರ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ರು.

error: Content is protected !!