ಯಾವೊಂದೂ ಮುಂಜಾಗ್ರತಾ ಕ್ರಮವಿಲ್ಲದೇ ಹಾವು ಹಿಡಿಯಲು ಹೋದ ವ್ಯಕ್ತಿಗೆ ಹಾವು ಕಚ್ಚಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಡಸದಲ್ಲಿ ಘಟನೆ ನಡೆದಿದ್ದು, ರಾಜು ಕೌದಿ ಎಂಬ ವ್ಯಕ್ತಿಯೇ ಹಾವು ಕಚ್ಚಿಸಿಕೊಂಡಿದ್ದಾನೆ.

ತಡಸ ಗ್ರಾಮದ ಇಟ್ಟಿಗೆ ಭಟ್ಟಿಯೊಂದರಲ್ಲಿ ಅವಿತು ಕುಳಿತಿದ್ದ ನಾಗರಹಾವನ್ನು ಹಿಡಿಯಲು ಮುಂದಾಗಿದ್ದ ರಾಜೂ ಕೌದಿ, ಕೋಲಿನಿಂದ ಇಟ್ಟಿಗೆ ಅಡಿಯಲ್ಲಿದ್ದ ನಾಗರಹಾವನ್ನು ಗಾಸಿಗೊಳಿಸಿದ್ದ. ಕೋಲಿನಿಂದ ಹಾವಿನ ಹೆಡೆಗೆ ಗಟ್ಟಿಯಾಗಿ ಹಿಡಿದು, ಆ ನಂತರದಲ್ಲಿ ಕೈಯಿಂದ ಹಿಡಿದುಕೊಂಡಿದ್ದ. ಈ ವೇಳೆ ಹಾವು ಆತನ ಕೈಗೆ ಬಲವಾಗಿ ಕಚ್ಚಿದೆ. ಪರಿಣಾಮ ಸಧ್ಯ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಒಟ್ನಲ್ಲಿ, ಹಾವು ಹಿಡಿಯೊ ಸಾಹಸ ಮಾಡಲು ಹೋದ ವ್ಯಕ್ತಿ ಪೌರುಷ ತೋರಲು ಹೋಗಿ ಆಸ್ಪತ್ರೆ ಪಾಲಾಗಿದ್ದಾನೆ. ತಡಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!