ಮುಂಡಗೋಡಿನಲ್ಲಿ ಹಾಡಹಗಲೇ ಕಳ್ಳನ ಕರಾಮತ್ತು, ಹಣದ ಬ್ಯಾಗ್ ಕಿತ್ತು ಪರಾರಿ ಯತ್ನ, ಬೆನ್ನತ್ತಿ ಹಿಡಿದ ಸಾರ್ವಜನಿಕರು..!

ಮುಂಡಗೋಡ: ಪಟ್ಟಣದಲ್ಲಿ ಚಾಲಾಕಿ ಕಳ್ಳನೊಬ್ಬ ಹಾಡಹಗಲೇ ಹಣದ ಬ್ಯಾಗ್ ಕಿತ್ತುಕೊಂಡು ಓಡಿ ಹೋದ ಘಟನೆ ನಡೆದಿದೆ..

ಪಟ್ಟಣದ ಅಂಚೆ ಕಚೇರಿಯ ಸಿಬ್ಬಂದಿಯೊಬ್ಬರು ಇಂದು ಒಂದು ಲಕ್ಷ ರೂ. ಹಣವನ್ನು ತಮ್ಮ ಬ್ಯಾಗ್ ನಲ್ಲಿಟ್ಟುಕೊಂಡು ಬ್ಯಾಂಕ್ ಗೆ ಜಮಾ ಮಾಡಲು ಹೊರಟಿದ್ದಾರೆ. ಈ ವೇಳೆ ಯಲ್ಲಾಪುರ ರಸ್ತೆಯ ತಂಗಮ್ ಮೆಡಿಕಲ್ಸ್ ನಲ್ಲಿ ಮಾತ್ರೆ ಖರೀಧಿಸಲು ಹೋಗಿದ್ದಾರೆ‌. ಈ ವೇಳೆ ಇದನ್ನೇಲ್ಲ ಗಮಿಸುತ್ತಲೇ ಇದ್ದ ವ್ಯಕ್ತಿ ಏಕಾಏಕಿ ಬ್ಯಾಗ್ ಕಿತ್ತುಕೊಂಡು ಓಡಿ ಹೋಗಿದ್ದಾನೆ. ನಂತರ ಬ್ಯಾಗ್ ಕಳೆದುಕೊಂಡ ಅಂಚೆಕಚೇರಿ ಸಿಬ್ಬಂದಿ ಕೂಗಾಡಿದಾಗ ಸಾರ್ವಜನಿಕರು ಕಳ್ಳನನ್ನು ಬೆನ್ನತ್ತಿದ್ದಾರೆ.

ಎಲ್ಲರಿಂದಲೂ ತಪ್ಪಿಸಿಕೊಂಡು ಓಡಿ ಹೋದ ಕಳ್ಳ, ಕೊನೆಗೆ ಶಿವಾಜಿ ಬ್ಯಾಂಕ್ ಬಳಿ ಸಾರ್ವಜನಿಕರ ಕೈಗೆ ತಗಲಾಕ್ಕೊಂಡಿದ್ದಾನೆ. ಹೀಗಾಗಿ, ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ‌.

ತಾಯಿಯ ಜೊತೆ ಬಂದಿದ್ದ..!
ಅಂದಹಾಗೆ, ಸಾರ್ವಜನಿಕರ ಕೈಗೆ ಸಿಕ್ಕು ಧರ್ಮದೇಟು ತಿಂತಿದ್ದ ಕಳ್ಳನನ್ನು ಬಿಡಿಸಿಕೊಳ್ಳಲು ಆತನ ತಾಯಿಯೂ ಸ್ಥಳಕ್ಕೆ ಬಂದಿದ್ದಾಳೆ‌. ತಕ್ಷಣವೇ ಸುದ್ದಿ ತಿಳಿದ ಮುಂಡಗೋಡ ಪೊಲೀಸರು ಸ್ಥಳಕ್ಕೆ ಬಂದು ಕಳ್ಳತನದ ಆರೋಪಿ ತಾಯಿ ಮಗನನ್ನು ಠಾಣೆಗೆ ಕರೆದೊಯ್ದಿದ್ದಾರೆ‌. ಸದ್ಯ ಆತನ ವಿಚಾರಣೆ ನಡೆದಿದೆ ಎನ್ನಲಾಗಿದೆ‌.

error: Content is protected !!