ಸ್ವಲ್ಪ ಮಿಸ್ಸಾಯ್ತು, ಮೊದಲು ನಾನು ಹೋಗಬೇಕಿತ್ತು, ಆದ್ರೆ ಅವನು ಮೊದಲು ಹೋದ” ರಾಘವೇಂದ್ರ ರಾಜಕುಮಾರ್ ಭಾವುಕ ನುಡಿ..!

ಬೆಂಗಳೂರು: ನಟ ಪವರ್ ಸ್ಟಾರ್, ಪುನೀತ್ ರಾಜಕುಮಾರ್ ಹೃದಯಾಘಾತದಿಂದ ವಿಧಿವಶ ಹಿನ್ನೆಲೆಯಲ್ಲಿ ಪುನೀತ್ ಸಹೋದರ ರಾಘವೇಂದ್ರ ರಾಜಕುಮಾರ್ ಮಾತನಾಡಿದ್ದಾರೆ.

“ಸ್ವಲ್ಪ ಮಿಸ್ಸಾಯ್ತು, ಮೊದಲು ನಾನು ಹೋಗ್ಬೇಕಿತ್ತು, ಆದ್ರೆ ಅವನು ಮೊದಲು ಹೋಗಿದ್ದಾನೆ, ಅಪ್ಪ ಅಮ್ಮನ ಹತ್ರ ನನಗಿಂತ ಮುಂಚೆನೇ ಹೋಗಿಬಿಟ್ಟ”

ಅಂತಾ ಪುನೀತ್ ರಾಜಕುಮಾರ್ ಹಿರಿಯ ಸಹೋದರ ನಟ ರಾಘವೇಂದ್ರ ರಾಜಕುಮಾರ್ ಬಾವುಕ ನುಡಿ ನುಡಿದಿದ್ದಾರೆ.

ಅಭಿಮಾನಿಗಳೇ ಅಪ್ಪುವನ್ನು ಯಾವುದೇ ತೊಂದರೆ ಆಗದಂತೆ ಕಳಿಸಿಕೊಡೋಣ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸರ್ಕಾರದ ಜೊತೆಗೆ ನಿಂತು, ನನ್ನ ತಮ್ಮನನ್ನು ಚೆನ್ನಾಗಿ ಕಳಿಸಿಕೊಡಿ. ಕಲಾವಿದರಿಗೆ ಸಾವಿಲ್ಲ, ಕಲಾವಿದರು ಸಿನಿಮಾಗಳ ಮೂಲಕ ಯಾವತ್ತಿಗೂ ಜೀವಂತವಾಗಿರ್ತಾರೆ.

ಅಂತಾ ರಾಘವೇಂದ್ರ ರಾಜಕುಮಾರ್ ಹೇಳಿದ್ದಾರೆ.

error: Content is protected !!