ಸಿದ್ದಾಪುರ: ಸರಳತೆ, ಸಜ್ಜನಿಕೆಯಿಂದ ಹೆಸರಾಗಿರೋ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಂಸ್ಕೃತ ಗುರುವಾಗಿದ್ದರು‌.

ಸಿದ್ದಾಪುರ ತಾಲೂಕಿನ ಕೊರ್ಲಕೈ ಪಂಚಾಯ್ತಿ ವ್ಯಾಪ್ತಿಯ ಜಿಡ್ಡಿ ಶಾಲೆಯ ಕೊಠಡಿ ಉದ್ಘಾಟನೆ ಕಾರ್ಯಕ್ರಮಕ್ಕಾಗಿ ಆಗನಿಸಿದ್ದ ಅವ್ರು, ಈ ಸಂದರ್ಭದಲ್ಲಿ ಮಕ್ಕಳಿಗೆ ಸಂಸ್ಕೃತ ಮಂತ್ರವನ್ನು ಹೇಳಿಕೊಡುವ ಮೂಲಕ ಸುದ್ದಿಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಮಕ್ಕಳು ಸಂಸ್ಕೃತ ಶ್ಲೋಕವನ್ನು ಹೇಳಿದಾಗ ಸಂತಸಗೊಂಡ ಸ್ಪೀಕರ್ ಕಾಗೇರಿಯವರು ಮಕ್ಕಳನ್ನು ಕರೆದು ಸಂಸ್ಕೃತ ಶ್ಲೋಕವನ್ನು ಹೇಳಿಕೊಡುವ ಮೂಲಕ ಮಕ್ಕಳಿಗೆ ಗುರುವಾದರು.

ಸ್ಪಷ್ಟ ಉಚ್ಚಾರದೊಂದಿಗೆ ಸಂಸ್ಕೃತ ಮಂತ್ರ ಪಠಣ ಮಾಡಿದ್ದು ಅವ್ರ ಅಭಿಮಾನಿಗಳಿಗೆ ಸಂತಸ ಮತ್ತು ಆಶ್ಚರ್ಯ ತಂದಿದೆ‌.

error: Content is protected !!