ಹುಬ್ಬಳ್ಳಿ: ಆ ಯುವಕ ತನ್ನ ಮುಂದಿನ ಬದುಕಿನ ಬಗ್ಗೆ ಸಾವಿರಾರು ಕನಸು ಕಂಡವನು. ಪ್ರತಿಷ್ಠಿತ ಮನೆತನದಲ್ಲಿ ಹುಟ್ಟಿದ್ದ ಆ ಯುವಕ ಗೆಳೆಯರ ಜೊತೆ ಎಂಜಾಯ್ ಮಾಡುತ್ತಾ ಮನೆಯ ಮುದ್ದು ಮಗನಾಗಿದ್ದವನು. ಆದ್ರೆ ಆ ಯುವಕನ ಮೇಲೆ ಅದಾಗಲೇ ಒಂದು ಗ್ಯಾಂಗ್ ನ ಕಣ್ಣು ಬಿದ್ದಿತ್ತು. ನಿನ್ನೆ ಯುವಕನ ಜೊತೆ ಸಣ್ಣದಾಗಿ ಜಗಳ ಮಾಡಿದ್ದ ಆ ಗ್ಯಾಂಗ್ ಸದ್ದಿಲ್ಲದೆ ಯುವಕನ ಪ್ರಾಣ ತಿಂದು ಹಾಕಿದೆ.

ಸ್ಮಾರ್ಟ್ ಹುಡುಗ ಕಣ್ರಿ..!
ಆಸ್ಪತ್ರೆಯ ಎದುರು ನಿಂತಿರೋ ನೂರಾರು ಜನರು..ಶವಾಗರದ ಬಳಿ ಬಂದು ಗೆಳೆಯನನ್ನ ಕೊನೆಯದಾಗಿ ನೋಡಬೇಕು ಅಂತ ಕಾಯುತ್ತಿರುವ ಸ್ನೇಹಿತರು. ಹೌದು ಹುಬ್ಬಳ್ಳಿಯ ಕಿಮ್ಸ್ ನ ಶವಾಗಾರದ ಬಳಿ ಇವರೆಲ್ಲ ಹೀಗೆ ಜಮಾಯಿಸೋಕೆ ಕಾರಣವೇ ಹೀಗೆ ಫೋಟೋದಲ್ಲಿ ಸ್ಮಾರ್ಟ್ ಆಗಿ ಡಿಫರೆಂಟ್ ಡಿಫರೆಂಟ್ ಪೋಸ್ ಕೊಟ್ಟಿರುವ ಹುಬ್ಬಳ್ಳಿಯ ಅಮರ ಕಾಲೋನಿ ನಿವಾಸಿ ಅಭಿಷೇಕ ರುದ್ರಗೌಡ ಪಾಟೀಲನ ಶವ ಕೊನೆಯದಾಗಿ ನೋಡೋಕೆ..

ಹೇಗಾಯ್ತು ಮರ್ಡರ್..?
ನಿನ್ನೆ ಸಂಜೆ ಮನೆಯಲ್ಲಿದ್ದ ಅಭಿಷೇಕನ್ನ ಮೂವರು ಹಂತಕರು ಹೊರಗೆ ಕರೆದಿದ್ದಾರೆ. ಹೊರ ಬಂದ ಅಭಿಷೇಕ ಗೌಡ ಜೊತೆ ಜಗಳಕ್ಕೆ ಮುಂದಾಗಿದ್ದಾರೆ. ಒಮ್ಮೆಲೇ ತಾರಕಕ್ಕೆ ಹೋದ ಸಣ್ಣ ಜಗಳ ಅಭಿಯ ಪ್ರಾಣವನ್ನೇ ತೆಗೆದುಕೊಂಡಿದೆ. ಅಭಿಷೇಕ ಜೊತೆಗೆ ಜಗಳಕ್ಕೆ ಮುಂದಾಗಿದ್ದ ಪ್ರದೀಪ್ ಬೇವಿನಕಟ್ಟಿ, ಸಾಯಿ ಉಣಕಲ್, ಕುಮಾರ ಇದ್ದಲಗಿ ಅಭಿಷೇಕ್ ಗೆ ಚಾಕು ಹಾಕುವ ಮೂಲಕ ಹತ್ಯೆಗೈದು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಛೇ ಕ್ಷುಲ್ಲಕ ಕಾರಣ..!
ಇನ್ನು ಈ ಹತ್ಯೆಗೆ ಕಾರಣವೇ ಕ್ಷುಲ್ಲಕ ಕಾರಣ.. ಕೆಲವು ದಿನಗಳ ಹಿಂದೆ ಆರೋಪಿ‌ ಪ್ರದೀಪ ಬೇವಿನಕಟ್ಟಿ, ಅಭಿಷೇಕ ಅವರ ಕಾರಿನ ಗಾಜು ಒಡೆದಿದ್ದ. ಅದನ್ನು ಸರಿ ಮಾಡಿಸಿಕೊಡುವಂತೆ ಅಭಿಷೇಕ ಅವನಲ್ಲಿ ಹೇಳಿದ್ದ. ಈ ಕುರಿತು ಇಬ್ಬರ ನಡುವೆ ವೈಮನಸ್ಸು ಹುಟ್ಟಿಕೊಂಡಿತ್ತು. ನಿನ್ನೆ ರಾತ್ರಿ ಎಂಟು ಗಂಟೆ ವೇಳೆ ಮೂವರು ಅಭಿಷೇಕ ಮನೆ ಎದುರಿಗೆ ಬಂದು ಜಗಳ ಮಾಡಿದ್ದಾರೆ. ಆಗ ಅಭಿಷೇಕ ಎದೆಗೆ ಚಾಕು ಇರಿದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕಿಮ್ಸ್’ಗೆ ದಾಖಲಿಸಿದ್ರು ಸಹ ಅದು ಪ್ರಯೋಜನವಾಗಿಲ್ಲ..ಮಾರ್ಗ ಮಧ್ಯದಲ್ಲೇ ಅಭಿಷೇಕ ಮೃತನಾಗಿದ್ದಾನೆ..

ಆರೋಪಿಗಳು

ಮೂವರು ಅಂದರ್..!
ಸದ್ಯ ಹತ್ಯೆಯಾದ 24 ಗಂಟೆಯಲ್ಲೇ ಹಂತಕರನ್ನ ಬಂಧಿಸುವಲ್ಲಿ ಅಶೋಕ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.. ಮೂವರನ್ನು ಅರೆಸ್ಟ್ ಮಾಡಿ ನ್ಯಾಯಾಲಯ ಹಾಜರು ಪಡಿಸಲಿದ್ದಾರೆ..ಆದ್ರೆ ಇತ್ತ ಮಗನ ಯಶಸ್ಸು ನೋಡಬೇಕು.. ಅವನ ಬೆಳವಣಿಗೆ ಕಂಡು ಖುಷಿ ಪಡಬೇಕಿದ್ದ ಮನೆಯವರ ಗೋಳು ಮಾತ್ರ ಹೇಳತಿರದಾಗಿದೆ..ಸಣ್ಣ ವಿಷಯಕ್ಕೆ ಒಂದು ಜೀವವೇ ಹೋಗಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ..

 

error: Content is protected !!