ಆತ ಕುಡಿದ ಮತ್ತಿನಲ್ಲಿದ್ದ ಪತಿ, ಪತ್ನಿ ಮನೆಯಲ್ಲಿ ಬಂದು ಉಳಿದಿದ್ದ ಆತನದು ನಿತ್ಯದ ಕಾಯಕ ಕುಡಿತ ಮತ್ತು ಜಗಳ. ನಿತ್ಯ ಕುಡಿದು ಬಂದು ಬೈಯುತ್ತಲೇ ಇದ್ದರೂ ಸಹ ಪತ್ನಿ ಹೇಗೋ ಹೊಂದಿಕೊಂಡು ಹೊರಟ್ಟಿದ್ದಳು. ಇಂದಲ್ಲ ನಾಳೆ ನನ್ನ ಪತಿ ಸುಧಾರಿಸಿಯಾನೂ ಅಂತಾನೆ ಅವಳು ತಿಳಿದಿದ್ದಳು. ಆದ್ರೆ ಪತ್ನಿಯನ್ನ ಚೆನ್ನಾಗಿ ನೋಡಕೊಳ್ಳಬೇಕಾದ ದುರುಳ ಪತಿ ಮಾಡಿದ್ದು ಮಾತ್ರ ವಿಚಿತ್ರ ಕಾರ್ಯ..ಕುಡಿತದ ಮತ್ತಿನಲ್ಲೇ ತೇಲುತ್ತಿದ್ದ ಪತಿ ಮಾತ್ರ ಹೆಂಡತಿಯ ಮೂಗನ್ನೇ ಕಚ್ಚಿಬಿಟ್ಟಿದ್ದಾನೆ.

ಹೌದು, ಹೀಗೆ ಸಂಪೂರ್ಣವಾಗಿ ರಕ್ತಸಿಕ್ತವಾಗಿರು ಮೂಗು..ಮೂಗಿನಿಂದ ನಿರಂತರವಾಗಿ ಸುರಿಯುತ್ತಿರುವ ರಕ್ತವನ್ನು ತಡೆಯುತ್ತ ನೋವಿನಿಂದ ನರಳುತ್ತಿರುವ ಈ ಮಹಿಳೆಯ ಹೆಸರು ಗೀತಾ ಅಂತ. ಈಕೆಯೇ ಈಗ ತನ್ನ ಪತಿಯಿಂದಲೇ ಮೂಗು ಕಚ್ಚಿಸಿಕೊಂಡ ಪತ್ನಿ. ಈಕೆಯ ಪತಿ ಉಮೇಶ ಗಂಡಗುದರಿ ಎಂಬಾತನೇ ಮೂಗು ಕಚ್ಚಿದ ಪತಿ. ಈ ಘಟನೆ ನಡೆದಿರೋದು ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ. ನಿನ್ನೆ ರಾತ್ರಿ ಗೀತಾಳೊಂದಿಗೆ ಮೊದಲಿಗೆ ಉಮೇಶ ಸಣ್ಣದಾಗಿ ಜಗಳ ತೆಗೆದಿದ್ದಾನೆ. ನಿತ್ಯ ಕುಡಿದು ಬಂದು ಇದೇ ರೀತಿ ಬೈದಾಡುತ್ತಲೇ ಇದ್ದ ಕಾರಣಕ್ಕೆ ಗೀತಾ ಸಹ ಈತನ ಬಗ್ಗೆ ಗಂಭೀರವಾಗಿ ತಿಳಿದುಕೊಂಡಿರಲಿಲ್ಲ. ಆದ್ರೆ ಏಕಾಏಕಿಯಾಗಿ ಗೀತಾಳ ಮೂಗು ಕಚ್ಚಿದ ಉಮೇಶ, ಗೀತಾಳ ತಾಯಿಯ ಕತ್ತು ಹಿಸುಕಿದ್ದಾನೆ. ಆಗ ಇವರಿಬ್ಬರೂ ಚೀರಾಡುವುದನ್ನು ಕೇಳಿದ ಜನ ಜಗಳ ವಿಕೋಪಕ್ಕೆ ಹೋಗಿದೆ ಎಂದು ತಿಳಿದು ಮನೆಗೆ ಬಂದಾಗ, ಉಮೇಶ ಓಡಿ ಪರಾರಿಯಾಗಿದ್ದಾನೆ.

ಪತ್ನಿಯ ಮೂಗು ಕಚ್ಚಿರೋ ಉಮೇಶ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ದೊಡ್ಡವಾಡ ಗ್ರಾಮದವನು. ಉಮೇಶ ಮತ್ತು ಗೀತಾ ದಂಪತಿಗೆ ಎರಡೂ ಮಕ್ಕಳು ಇವೆ. ಆದ್ರೆ ಕುಡಿತದ ದಾಸನಾಗಿದ್ದ ಉಮೇಶ ಐದು ವರ್ಷದ ಹಿಂದೆ ಪತ್ನಿಯೊಂದಿಗೆ ಜಗಳ ಮಾಡಿ ಎಲ್ಲಿಯೋ ಹೋಗಿ ಬಿಟ್ಟಿದ್ದನಂತೆ. ಆಗ ಗೀತಾ ಅಮ್ಮಿನಬಾವಿಯ ತನ್ನ ತವರೂ ಮನೆಯಲ್ಲಿಯೇ ಬಂದು ಉಳಿದಿದ್ದಳು. ಆದ್ರೆ ಈಗಷ್ಟೇ ಆರು ತಿಂಗಳ ಹಿಂದೆ ಮರಳಿ ಬಂದ ಉಮೇಶ ಅಮ್ಮಿನಬಾವಿಯ ಪತ್ನಿ ಮನೆಯಲ್ಲಿಯೇ ಇರೋಕೆ ಶುರು ಮಾಡಿದ್ದನಾದರೂ, ಕುಡಿದು ಬಂದು ಆಗಾಗ ಜಗಳ ತೆಗೆಯುತ್ತಲೇ ಇದ್ದ. ಇವರಿಗೂ ಇದು ನಿತ್ಯದ ರೂಢಿ ಆಗಿ ಹೋಗಿತ್ತು. ಆದ್ರೆ ನಿನ್ನೆ ಮಾತ್ರ ಆತ ಮನುಷ್ಯ ಆಗಿರದೇ ತನ್ನದೇ ಪತ್ನಿಯ ಮೂಗನ್ನು ಕಚ್ಚಿ ಬಿಟ್ಟಿದ್ದು, ಸದ್ಯ ಗಂಭೀರ ಗಾಯಗೊಂಡಿರುವ ಗೀತಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪತ್ನಿಯೊಂದಿಗೆ ಕೂಡಿ ಬಾಳಬೇಕಾದ ದುರುಳ ಪತಿ ಈಗ ಪತ್ನಿಯ ಮೂಗು ಕಚ್ಚಿ ಪರಾರಿಯಾಗಿದ್ದು, ಈತನ ವಿರುದ್ಧ ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಿಸಿಕೊಂಡ ಪೊಲೀಸರು ಉಮೇಶನ ಬಂಧನಕ್ಕೆ ಜಾಲ ಬೀಸಿದ್ದು, ಅತ್ತ ತೀರಾ ಬಡ ಕುಟುಂಬದ ಗೀತಾಳ ಮೂಗಿಗೆ ಸರ್ಜರಿ ಮಾಡಬೇಕಾಗಿದ್ದು, ಪತಿಯ ದೌರ್ಜನ್ಯದ ಜೊತೆಗೆ ಆಕೆಯ ಮೇಲೆ ಈಗ ದೊಡ್ಡ ಆರ್ಥಿಕ ಹೊರೆಯೂ ಬಿದ್ದಂತಾಗಿದೆ.

error: Content is protected !!