ಶಿರಸಿ : 2019 – 20 ಸಾಲಿನಲ್ಲಿ ಕೆಡಿಸಿಸಿ ಬ್ಯಾಂಕ್ ಉತ್ತಮ ಪ್ರಗತಿ ಸಾಧಿಸಿದ್ದು ಈ ಬಾರಿ ಬ್ಯಾಂಕ್ ಒಟ್ಟು 7.72 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ ಅಂತಾ ಕಾರ್ಮಿಕ ಹಾಗು ಸಕ್ಕರೆ ಖಾತೆ ಸಚಿವ ಬ್ಯಾಂಕ್ ಅಧ್ಯಕ್ಷ ಶಿವರಾಮ್ ಹೆಬ್ಬಾರ್ ತಿಳಿಸಿದ್ರು.. ಅವರು ಇಂದು ಕೆ.ಡಿ.ಸಿ.ಸಿ ಬ್ಯಾಂಕ್ ನ ಪ್ರಧಾನ ಕಚೇರಿಯಲ್ಲಿ 2019 – 20 ಸಾಲಿನ ಬ್ಯಾಂಕ್ ನ ಪ್ರಗತಿ ಕುರಿತು ಪತ್ರಿಕಾಗೋಷ್ಠಿಯನ್ನು ನಡೆಸಿ ಸಂಕ್ಷಿಪ್ತ ವರದಿಯನ್ನು ನೀಡಿ ಮಾತನಾಡುತ್ತಿದ್ದರು..

ಬ್ಯಾಂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ವಿವಿಧ ಕೃಷಿ ಉದ್ದೇಶಗಳಿಗೆ ಮಾಧ್ಯಮಿಕ ಸಾಲ ನೀಡುತ್ತಿದ್ದು , ನಮ್ಮ ಜಿಲ್ಲೆಯನ್ನು ತೋಟಗಾರಿಕಾ ಜಿಲ್ಲೆಯೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ತೋಟಗಾರಿಕಾ ಬೆಳೆಗಳ ಬಗ್ಗೆಯೂ ಸಹ ಸಾಲ ನೀಡಲಾಗುವುದು ಅಂತಾ ಘೋಷಿಸಿದ ಸಚಿವ್ರು, ಬ್ಯಾಂಕ್ ನ ಈ ಪ್ರಗತಿಗೆ ಕಾರಣವಾದ ಗ್ರಾಹಕರಿಗೆ ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್ ನ ಉಪಾಧ್ಯಕ್ಷರಾದ ಶ್ರೀ ಮೋಹನ ನಾಯಕ ಹಾಗೂ ಸರ್ವ ನಿರ್ದೇಶಕರು , ವ್ಯವಸ್ಥಾಪಕ ನಿರ್ದೇಶಕರು ಹಾಜರಿದ್ದರು.

error: Content is protected !!