ಮುಂಡಗೋಡ: ಬೈಕ್ ಆಯತಪ್ಪಿ ಬಿದ್ದು ಬೈಕ್ ಸವಾರ ಬೌದ್ದ ಸನ್ಯಾಸಿಗೆ ಗಂಭೀರ ಗಾಯವಾಗಿ, ಹಿಂಬದಿ ಕುಳಿತಿದ್ದ ಮತ್ತೋರ್ವನಿಗೆ ಸಣ್ಣಪುಟ್ಟ ಗಾಯವಾದ ಘಟನೆ ತಾಲೂಕಿನ ಕೊಪ್ಪ ಇಂದಿರಾನಗರ ಸೇತುವೆ ಬಳಿ ನಡೆದಿದೆ..

ಗಾಯಗೊಂಡವರನ್ನು ಟಿಬೆಟಿಯನ್ ಲಾಮಾ ಕ್ಯಾಂಪ್ ನಂ.2 ರ ಬೌದ್ದ ಬಿಕ್ಕು ಸಿರಿಂಗ್ ಅಂತಾ ಗುರುತಿಸಲಾಗಿದೆ.. ಹಿಂಬದಿ ಸವಾರ ನಿಮಾ ಅಂತಾ ತಿಳಿದು ಬಂದಿದೆ..

ಇವರಿಬ್ಬರು ಸೇರಿ ಮುಂಡಗೋಡದಿಂದ ಕಲಘಟಗಿ ರಸ್ತೆಯ ಕಡೆ ತಮ್ಮ ಮೋಟಾರ ಸೈಕಲ್‌ನ್ನು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಇಂದಿರಾನಗರದ ಸೇತುವೆಯ ಹತ್ತಿರ ಬೈಕನಿಂದ ಆಯತಪ್ಪಿ ಬಿದ್ದಿದ್ದಾರೆ.. ಚಾಲಕ ಸಿರಿಂಗ ಎಂಬುವನಿಗೆ ತಲೆಗೆ ಹಾಗೂ ಹಣೆಗೆ ಗಂಭೀರ ಗಾಯಗೊಂಡಿದ್ದು ತಾಲೂಕಾ ಆಸ್ಪತ್ರೆಯಲ್ಲಿ ಪ್ರಾಥಮಿಕ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸಗೆ ಕಳುಹಿಸಲಾಗಿದೆ. ಹಿಂಬದಿ ಸವಾರನಿಗೆ ಸಣ್ಣ ಪುಟ್ಟ ಗಾಯಗಾಳಾಗಿವೆ. ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

error: Content is protected !!