Death News; ಮುಂಡಗೋಡ ತಾಲೂಕಿನ ಅಗಡಿಯಲ್ಲಿ ಯುವತಿಯೋರ್ವಳು ನೇಣಿಗೆ ಕೊರಳೊಡ್ಡಿದ್ದಾಳೆ. ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಗಡಿ ಗ್ರಾಮದ ಅನ್ನಪೂರ್ಣ ರಾಮಣ್ಣ ಲಮಾಣಿ(20), ಎಂಬುವವಳೆ ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೆ ಅಸಲೀ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ. ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ👉 ಹುನಗುಂದದಲ್ಲಿ ಅನಾರೋಗ್ಯಕ್ಕೀಡಾದ ಶಿವಯ್ಯನವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ, ಶಾಸಕ ಹೆಬ್ಬಾರ್..! ಹುನಗುಂದ ಗ್ರಾಮಕ್ಕೆ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ, ಕಾರ್ಯಕ್ರಮದಲ್ಲಿ ಭಾಗಿ..!
Top Stories
ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!
ಗೋವಾ; ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ, 23 ಮಂದಿ ಸಾವು..!
ಮುಂಡಗೋಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಬೆಂಕಿ ಅನಾಹುತ, ಸುಟ್ಟು ಕರಕಲಾಯ್ತು ಪರ್ನಿಚರ್ ಅಡ್ಡೆ..! ಲಕ್ಷಾಂತರ ಬೆಲೆಯ ಪರ್ನಿಚರ್ ಗಳು ಬೆಂಕಿಗಾಹುತಿ..!
ಶಿರಸಿ ಎಸಿ ಕಾವ್ಯಾರಾಣಿ ವರ್ಗಾವಣೆಗೆ ಹಲವರ ಆಕ್ರೋಶ, ಆದೇಶ ರದ್ದುಗೊಳಿಸುವಂತೆ ಶೇಖರ್ ಲಮಾಣಿ ಆಗ್ರಹ..!
ಅಗಡಿ ಶ್ರೀಗಂಧ ತುಂಡುಗಳು ಸಿಕ್ಕ ಕೇಸ್, ಕಚೇರಿಗೇ ಬಂದ್ರೂ ಆರೋಪಿಯನ್ನ ಬಿಟ್ಟು ಕಳಿಸಿದ್ರಾ ಅಧಿಕಾರಿಗಳು..? RFO ಕಚೇರಿಯಿಂದಲೇ ಆರೋಪಿ ಮತ್ತೆ ಎಸ್ಕೇಪ್..!
ಅಗಡಿಯಲ್ಲಿ ಅರಣ್ಯ ಅಧಿಕಾರಿಗಳ ಭರ್ಜರಿ ದಾಳಿ, 60 ಕೆಜಿಗೂ ಹೆಚ್ಚು ಶ್ರೀಗಂಧದ ಮರದ ತುಂಡುಗಳು ವಶಕ್ಕೆ, ಆರೋಪಿ ಪರಾರಿ..!
ಚಿಗಳ್ಳಿ ಪ್ರೌಢಶಾಲೆಯ ಶಿಕ್ಷಕ ದಾಸಪ್ಪ, ಸಸ್ಪೆಂಡ್..! ಹಲವು ದಿನಗಳ ಗುದುಮುರುಗಿ ಬಳಿಕ ಶಿರಸಿ ಡಿಡಿಪಿಐ ಖಡಕ್ ಆದೇಶ..!
ಮುಂಡಗೋಡ ಮಾದರಿ ಶಾಲೆಯ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥ..! ಆಸ್ಪತ್ರೆಗೆ ದಾಖಲು..!
ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ..! ಮೊಮ್ಮಕ್ಕಳು, ಮಗನೊಂದಿಗೆ ಸಾವು ಕಂಡ ತಂದೆ..!
ಮುಂಡಗೋಡ ಪೊಲೀಸರ ತಡರಾತ್ರಿ ಕಾರ್ಯಾಚರಣೆ..! “ಚರಸ್” ದಂಧೆಯಲ್ಲಿ ತೊಡಗಿದ್ದ ಇಂಜಿನೀಯರ್ ಅಂದರ್..!
ಸನವಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್, ತುಂಡಾಗಿ ಬಿದ್ದ ವಿದ್ಯುತ್ ಕಂಬ..!
ಯಲ್ಲಾಪುರ ಪೊಲೀಸ್ರ ಸಿನಿಮಿಯ ರೀತಿ ದಾಳಿ..!! ಉಮ್ಮಚಗಿ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ನಟೋರಿಯಸ್ ಕಳ್ಳನ ಗ್ಯಾಂಗ್ ಅಂದರ್..!
ಹನುಮಾಪುರದಲ್ಲಿ ಭೀಕರ ಬೆಂಕಿ ಅವಘಡ..! ಬೆಂಕಿಯಲ್ಲಿ ಮನೆಯ ಸಮೇತ ಬೆಂದು ಹೋದ ವೃದ್ದೆ..!
ಪಾಳಾದ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಇದೇಂಥ ಸ್ಥಿತಿ..? ಈ ಮಕ್ಕಳಿಗೆ ನುಸಿ ತುಂಬಿರೋ ದವಸದ ಆಹಾರವೇ ಗತಿಯಾ..?
ಹುಬ್ಬಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮುಂಡಗೋಡಿನ ಮಹದೇಶ್ವರ ಲಿಂಗದಾಳ, RTI ಹೆಸ್ರಲ್ಲಿ ಈ ವಂಚಕ ಪಡೆ ಮಾಡಿದ್ದೇನು..?
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
Category: ಮುಂಡಗೋಡ ಸುದ್ದಿ
ಹುನಗುಂದ ಗ್ರಾಮಕ್ಕೆ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ, ಕಾರ್ಯಕ್ರಮದಲ್ಲಿ ಭಾಗಿ..!
Shivaram Hebbar; ಮುಂಡಗೋಡ; ಶಾಸಕ ಶಿವರಾಮ ಹೆಬ್ಬಾರ್ ಅವರು ಇಂದು ಹುನಗುಂದ ಗ್ರಾಮದ ವಿರಕ್ತಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳೆಯರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಮ.ನಿ.ಪ್ರ ಅಭಿನವ ಸಿದ್ಧಲಿಂಗ ಮಹಾಸ್ವಾಮಿಗಳು ವಿರಕ್ತಮಠ ಹಾಗೂ ಮಾತೆ ಬಸವೇಶ್ವರಿ ಬಸವಧಾಮ ಅತ್ತಿವೇರಿ ಅವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಹಲವು ಪ್ರಮುಖರು ಪಾಲ್ಗೊಂಡಿದ್ದರು.
ಮುಂಡಗೋಡ ಕ್ರೈಂ ಪೊಲೀಸರ ಭರ್ಜರಿ ಕಾರ್ಯಾಚರಣೆ..!? ತೆಗ್ಗಿನಕೊಪ್ಪ ಬಳಿ “ಅಂದರ್ ಬಾಹರ್” ನಲ್ಲಿ ತೊಡಗಿದ್ದವರ “ಖೇಲ್” ಖತಂ..!?
Mundgod Police News; ಮುಂಡಗೋಡಿನ ಕ್ರೈಂ ಪಿಎಸ್ಐ ವಿನೋದ್ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ ಅನ್ನೊ ಮಾಹಿತಿ ಲಭ್ಯವಾಗಿದೆ, ಮುಂಡಗೋಡ ತಾಲೂಕಿನ ತೆಗ್ಗಿನಕೊಪ್ಪದ ಬಳಿ, ಅಕ್ರಮವಾಗಿ ಹುಟ್ಟಿಕೊಂಡಿದ್ದ ಇಸ್ಪೀಟು ಅಡ್ಡೆಯ ಮೇಲೆ ದಾಳಿ ನಡೆಸಿ, ಏನಿಲ್ಲವೆಂದರೂ 6 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿರೋ ಮಾಹಿತಿ ಲಭ್ಯವಾಗ್ತಿದೆ. ಏನಿಲ್ಲವೆಂದರೂ ಎರಡೂವರೇ ಲಕ್ಷಕ್ಕೂ ಹೆಚ್ಚು ಹಣವನ್ನು ಜಪ್ತಿ ಮಾಡಿದ್ದಾರೆ ಅನ್ನೋ ಮಾಹಿತಿ ಇದೆ. ಶಿರಸಿ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ನಡೆದಿರೋ ದಾಳಿ ಎನ್ನಲಾಗಿದ್ದು, ಈ ಕ್ಷಣಕ್ಕೂ ಯಾವುದೂ...
ಚಿಗಳ್ಳಿ ಪ್ರೌಢಶಾಲೆಯಲ್ಲಿ ಆ “ಮಾಜಿ”ಗಳ ವಿರುದ್ಧ ಪಾಲಕರ ಆಕ್ರೋಶ; ಅಷ್ಟಕ್ಕೂ, ಆ ಆರೋಪಗಳೇಲ್ಲ ನಿಜವಾ..? ಹಾಗಿದ್ರೆ ತನಿಖೆ ಯಾವಾಗ..?
Education Department News; ಮುಂಡಗೋಡ ತಾಲೂಕಿನ ಚಿಗಳ್ಳಿ ಸರ್ಕಾರಿ ಪ್ರೌಢಶಾಲೆಯ ಹಕೀಕತ್ತುಗಳು ದಿನಕ್ಕೊಂದು ತಿರುವು ಪಡೆದುಕೊಳ್ತಿವೆ. ಕಳೆದ ಎರಡು ದಿನಗಳ ಹಿಂದಷ್ಟೇ, ಈ ಶಾಲೆಯ ಕೆಲವು ಪಾಲಕರು, ಹಲವು ವಿಷಯಗಳ ಒಕ್ಕಣಿಕೆ ಬರೆದು ಬಿಇಓ, ಡಿಡಿಪಿಐ ಸೇರಿದಂತೆ ಶಿಕ್ಷಣ ಇಲಾಖೆಯ ಹಲವು ಅಧಿಕಾರಿಗಳಿಗೆ ದೂರು ನೀಡಿದ್ದರು. ಆ ದೂರಿನ ಆಧಾರದಲ್ಲಿ ಪಬ್ಲಿಕ್ ಫಸ್ಟ್ ನ್ಯೂಸ್ ಕೂಡ ವರದಿ ಮಾಡಿತ್ತು. ಇದು ದೂರಿಗೆ, ಪ್ರತಿದೂರು..! ಆದ್ರೆ ಇದೀಗ, ಅದೇ ಪ್ರೌಢಶಾಲೆಯ ಅಂಗಳದಿಂದ ಮತ್ತೊಂದು ಪ್ರತಿದೂರು ಬಂದಿದೆ. ಅಸಲು ಸದ್ಯ...
ಮುಂಡಗೋಡಿನ ಇಂದಿರಾನಗರ ಬಳಿ ಬೈಕ್ ಅಪಘಾತ, ಇಂದೂರಿನ ವ್ಯಕ್ತಿಗೆ ಗಂಭೀರ ಗಾಯ..!
Bike Accident; ಮುಂಡಗೋಡ ತಾಲೂಕಿನ ಇಂದಿರಾನಗರ ಬಳಿ ಬೈಕ್ ಅಪಘಾತವಾಗಿದೆ. ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಅಂಬುಲೆನ್ಸ್ ಗೆ ಕರೆಮಾಡಿದ್ರೂ ಅಂಬುಲೆನ್ಸ್ ದೊರೆಯದ ಹಿನ್ನೆಲೆಯಲ್ಲಿ ಟಾಟಾ ಎಸ್ ವಾಹನದಲ್ಲಿ ಗಾಯಾಳುವನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಅಂದಹಾಗೆ, ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಇಂದೂರು ಗ್ರಾಮದವನು ಅನ್ನೋ ಮಾಹಿತಿ ಲಭ್ಯವಾಗಿದೆ. ಆದ್ರೆ, ಹೆಸರು ತಿಳಿದುಬಂದಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮುಂಡಗೋಡ ಪೊಲೀಸರ ಮುತುವರ್ಜಿ, ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ಯುವಕ ಪತ್ತೆ..!
Mundgod Police News; ಮುಂಡಗೋಡ ಪೊಲೀಸರ ಮುತುವರ್ಜಿಯಿಂದ, ಕಳೆದ ವರ್ಷ ನಾಪತ್ತೆಯಾಗಿದ್ದ ಬಾಲಕ ಒಂದು ವರ್ಷದ ನಂತ್ರ ಪತ್ತೆಯಾಗಿದ್ದಾನೆ. ಮುಂಡಗೋಡ ತಾಲೂಕಿನ ಅಂದಲಗಿಯಿಂದ ಅಡ್ಮಿಷನ್ ಮಾಡಿಸಲು ಹೋಗಿ ಬರ್ತಿನಿ ಅಂತಾ ಹೋದವನು ಹೋಗಿದ್ದವ, ವಾಪಸ್ ಬಂದಿರಲಿಲ್ಲ. ಅಂದಹಾಗೆ,ಅಂದಲಗಿ ಗ್ರಾಮದ ಕು. ಪ್ರೀತಮ್ ಹರೀಶ್ ಪವಾರ್(18), ಎಂಬುವವನೇ ನಾಪತ್ತೆಯಾಗಿ, ಒಂದು ವರ್ಷದ ನಂತ್ರ ಪತ್ತೆಯಾಗಿದ್ದಾನೆ. Mundgod Police News; ಉತ್ತರ ಕನ್ನಡ ಎಸ್ಪಿ ಎಂ. ನಾರಾಯಣ್, ಹೆಚ್ಚುವರಿ ಎಸ್ಪಿಗಳಾದ ಕೃಷ್ಣಮೂರ್ತಿ. ಜಿ, ಜಗದೀಶ ನಾಯ್ಕ, ನಿರ್ದೇಶನದಲ್ಲಿ, ಶಿರಸಿ ಡಿವೈಎಸ್ಪಿ...
ಮಣಿಪಾಲದಲ್ಲಿ ಬೈಕ್ ಅಪಘಾತ, ಮುಂಡಗೋಡಿನ ಅತ್ತಿವೇರಿ ಗೌಳಿ ದಡ್ಡಿಯ ಯುವಕ ದಾರುಣ ಸಾವು..!
Accident News; ಮುಂಡಗೋಡ ತಾಲೂಕಿನ ಅತ್ತಿವೇರಿ ಗೌಳಿ ದಡ್ಡಿಯ ಯುವಕನೋರ್ವ, ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಮೃತಪಟ್ಟಿದ್ದಾನೆ. ಅತ್ತಿವೇರಿ ಗೌಳಿ ದಡ್ಡಿಯ ಬಮ್ಮು ಜನ್ನು ಬೋಡೇಕರ್(20), ಮೃತಪಟ್ಟ ಯುವಕನಾಗಿದ್ದಾನೆ. ಈತ ಕೆಲಸ ನಿಮಿತ್ತ, ಅತ್ತಿವೇರಿ ಗೌಳಿ ದಡ್ಡಿಯಿಂದ ಉಡುಪಿಯ ಮಣಿಪಾಲಕ್ಕೆ ತೆರಳುತ್ತಿದ್ದ ವೇಳೆ, ಜೂನ್ 26 ರಂದು ಸಂಜೆ ಬೈಕ್ ಅಪಘಾತವಾಗಿದೆ. Accident News; ಹೀಗಾಗಿ, ಗಂಭೀರ ಗಾಯಗೊಂಡಿದ್ದ ಯುವಕನನ್ನು ಮಣಿಪಾಲದ ಸ್ಥಳೀಯ ಆಸ್ಪತ್ರೆಗೆ...
ತಡಸ ತಾಯವ್ವ ದೇವಸ್ಥಾನ ಸಮೀಪ ಲಾರಿ ಅಪಘಾತ..! ಮುಂಡಗೋಡ- ಹುಬ್ಬಳ್ಳಿ ರಸ್ತೆ ಸಂಚಾರ ಸ್ಥಗಿತ..!
Lorry accident; ಮುಂಡಗೋಡ ತಾಲೂಕಿನ ಗಡಿ ಭಾಗದ, ತಡಸ ಸಮೀಪದ ಹುಬ್ಬಳ್ಳಿ ರಸ್ತೆಯಲ್ಲಿ, ಲಾರಿಯೊಂದು ಅಪಘಾತವಾಗಿ ಬಿದ್ದಿದೆ. ಹೀಗಾಗಿ, ಮುಂಡಗೋಡ- ಹುಬ್ಬಳ್ಳಿ ರಸ್ತೆ ಸಂಚಾರ ಬಂದ್ ಆಗಿದೆ. ಕನಿಷ್ಟ ಎರಡರಿಂದ ಮೂರು ಗಂಟೆಗಳ ಸಂಚಾರ ಸ್ಥಗಿತವಾಗುವ ಸಾಧ್ಯತೆ ಇದೆ. ಹುಬ್ಬಳ್ಳಿ ರಸ್ತೆಯ ತಾಯವ್ವನ ದೇವಸ್ಥಾನದ ಸಮೀಪ ಲಾರಿ ಅಪಘಾತವಾಗಿ ಅಕ್ಷರಶಃ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಹೀಗಾಗಿ, ರಸ್ತೆಯಲ್ಲಿ ವಾಹಮ ಸಂಚಾರಕ್ಕೆ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಪೊಲೀಸರು ಶಿರಸಿಯಿಂದ ಹುಬ್ಬಳ್ಳಿಯೆಡೆಗೆ ಸಂಚರಿಸುವ ವಾಹನಗಳನ್ನು ಬಂಕಾಪುರ ರಸ್ತೆ ಮಾರ್ಗವಾಗಿ...
ಚಿಗಳ್ಳಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರು HM ಆಗಿದ್ದಾರಂತೆ, SDMC ರಚಿಸಿದ್ದು ಗೊತ್ತೇ ಇಲ್ಲವಂತೆ..! ಇದು ಪಾಲಕರ ಆಗ್ರಹದ ಅರ್ಜಿ..! ಬಿಇಓ ಮೇಡಂ ಏನ್ರಿ ಇದೇಲ್ಲ..?
Education Department; ಮುಂಡಗೋಡ ತಾಲೂಕಿನ ಚಿಗಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಪಾಲಕರು ಮತ್ತೆ ಆಕ್ರೋಶಗೊಂಡಿದ್ದಾರೆ. ಪ್ರೌಢಶಾಲೆಯ ಇಡೀ ಅಂಗಳದಲ್ಲಿ ರಾಜಕೀಯ ಅನ್ನೋದು ಹಾಸು ಹೊಕ್ಕಾಗಿದೆ, ಹೀಗಾಗಿ, ಇಲ್ಲಿ ಕಾನೂನು ಅನ್ನೋದು ಯಾರಿಗೂ ಅನ್ವಯವಾಗ್ತಿಲ್ಲ, ತಮಗೆ ಇಷ್ಟ ಬಂದಂಗೆ ಎಲ್ಲವನ್ನೂ ನಡೆಸಿಕೊಂಡು ಹೋಗ್ತಿದಾರೆ. ಹೀಗಾಗಿ, ಇಲ್ಲಿನ ಶಿಕ್ಷಣ ಅಧೋಗತಿಗೆ ಇಳಿದಿದೆ ಅಂತಾ ಹಲವು ಪಾಲಕರು ಬಿಇಓ ಗೆ ಲಿಖಿತವಾಗಿ ದೂರು ನೀಡಿದ್ದಾರೆ. SDMC ಸಮಿತಿ ಆಯ್ಕೆ ಅದ್ವಾನ..? ಅಸಲು, ಆ ಪ್ರೌಢಶಾಲೆಯಲ್ಲಿ ಕಲಿಯುತ್ತಿರೋ ವಿದ್ಯಾರ್ಥಿಗಳ ಪಾಲಕರು ಸಭೆ ಮಾಡಿ, SDMC...
ಬೆಡಸಗಾಂವನಲ್ಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನದ ಮೇಲೆ ಬಿದ್ದ ಮರ..!
Tree Fell on a Vehicle; ಮುಂಡಗೋಡ ತಾಲೂಕಿನ ಬೆಡಸಗಾಂವ್ ನಲ್ಲಿ ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನದ ಮೇಲಿನ ಮರ ಬಿದ್ದಿದೆ. ವಾಹನದಲ್ಲಿ ಹತ್ತಕ್ಕೂ ಹೆಚ್ಚು ಕಾರ್ಮಿಕರು ಇದ್ದರೂ ಅದೃಷ್ಟವಶಾತ್ ಯಾರಿಗೂ ಅನಾಹುತ ಸಂಭವಿಸಿಲ್ಲ. ಬೆಡಸಗಾಂವನ ವಿಜಯ ನಾಯ್ಕ್ ಎಂಬುವವರು ಮರ ಮುರಿದು ಬಿಳುವ ಅನುಮಾನದಿಂದ, ಮೊದಲೇ ವಿದ್ಯುತ್ ಸಂಪರ್ಕ್ ಕಡಿತಗೊಳಿಸಿದ್ದರು. ಹೀಗಾಗಿ, ಮರದ ಜೊತೆ ವಿದ್ಯುತ್ ತಂತಿಯೂ ಬಿದ್ದರೂ ಏನೂ ಅನಾಹುತ ಸಂಭವಿಸಿಲ್ಲ. ಇದನ್ನೂ ಓದಿ👉ಮುಂಡಗೋಡ ಠಾಣೆಯಲ್ಲಿ ಏಜೇಂಟರುಗಳ ಹಾವಳಿ ಇಲ್ಲ, ನಿಮಗೆ ಕಂಡುಬಂದ್ರೆ ಅಂತವರ ಮಾಹಿತಿ...









