Borewell cable theft; ಮುಂಡಗೋಡ ತಾಲೂಕಿನ ಕೊಪ್ಪ (ಇಂದೂರು) ಭಾಗದಲ್ಲಿ ಬೋರವೆಲ್ ಮೋಟರ್ ಕೇಬಲ್ ಕಳ್ಳರ ಹಾವಳಿ ರೈತರ ನಿದ್ದೆಗೆಡಿಸಿದೆ. ಕಳೆದ ಒಂದೂವರೇ ವರ್ಷದಿಂದ ನಿತ್ಯವೂ ಒಂದಿಲ್ಲೊಂದು ರೀತಿಯಲ್ಲಿ ಕೇಬಲ್ ಕಳ್ಳತನ, ಮೋಟರ್ ಕಳ್ಳತನ ಮಾಡಿಕೊಂಡು ಹೋಗುವ ಕಳ್ಳರಿಗೆ ಯಾರ ಭಯವೂ ಇಲ್ಲವಾಗಿದೆ. ಹಾಗಂತ, ಕೊಪ್ಪ, ಇಂದೂರು ಭಾಗದ ರೈತರು ಪೊಲೀಸ್ ಇಲಾಖೆಯ ಮೇಲೆ ಆಕ್ರೋಶಗೊಂಡಿದ್ದಾರೆ. ಅದೇಷ್ಟೇ ಬಡಕೊಂಡ್ರೂ, ಇಷ್ಟೇಲ್ಲ ಕಳ್ಳತನ ಪ್ರಕರಣಗಳು ನಡೆದ್ರೂ ಇದುವರೆಗೂ ಒಂದೇ ಒಂದು ಕೇಸ್ ಖುಲ್ಲಾ ಮಾಡಿಲ್ಲ ಅನ್ನೋದು ಅನ್ನದಾತರ ಆಕ್ರೋಶ..

ಹೌದು, ಮುಂಡಗೋಡ ತಾಲೂಕಿನಲ್ಲಿ ರೈತರ ಗದ್ದೆಗಳಲ್ಲಿನ ಬೋರವೆಲ್ ಗೆ ಅಳವಡಿಸಿದ, ಕೇಬಲ್ ಕಳ್ಳತನವಾಗ್ತಿದೆ. ನಿತ್ಯವೂ ಒಂದಿಲ್ಲೊಂದು ಕಡೆ ಕಳ್ಳರು ಕೈಚಳಕ ತೋರಿಸ್ತಾನೇ ಇದಾರೆ. ಅದ್ರಲ್ಲೂ, ಇಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಪ್ಪ ಗ್ರಾಮದಲ್ಲಿ ಕಳ್ಳರ ಕರಾಮತ್ತುಗಳು ರೈತರ ನಿದ್ದೆಗೆಡಿಸಿವೆ. ಕಳ್ಳತನ ನಡೆದಾಗಲೊಮ್ಮೆ ಪೊಲೀಸರಿಗೆ ದೂರು ಕೊಡೋದು, ಪೊಲೀಸ್ರು ಬಂದು ಪರಿಶೀಲನೆ ಮಾಡೋದು, ಅಷ್ಟೆ ಬಿಟ್ರೆ ಬೇರೆ ಏನಂದ್ರೆ, ಏನೂ ನಡೆಯುತ್ತಿಲ್ಲ. ಕೇವಲ್ ಕಳ್ಳರು ಮಾತ್ರ ಅಂಜದೇ, ಅಳುಕದೆ ಯಾರ ಹಂಗೂ ಇಲ್ಲದೇ ಕಳ್ಳತನ ಮಾಡಿಕೊಂಡು ಹೋಗುತ್ತಲೇ ಇದ್ದಾರೆ‌. ಹೀಗಾಗಿ, ಅನ್ನದಾತ ಅಕ್ಷರಶಃ ಆಕ್ರೋಶಗೊಂಡಿದ್ದಾನೆ.

ಎರಡು ದಿನ ಸರಣಿ ಕಳ್ಳತನ..!
ಅಸಲು, ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದ ರೈತರು ಹೇಳೋ ಪ್ರಕಾರ, ಮೊನ್ನೆ ಶನಿವಾರ ಕೊಪ್ಪ ಗ್ರಾಮಕ್ಕೆ ಸಮೀಪವಿರೋ ಶೋಭಾ ಎಂಬುವವರಿಗೆ ಸೇರಿದ ತೋಟದ ಮನೆಗೆ ಕಳ್ಳರು ನುಗ್ಗಿದ್ದಾರೆ. ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿರೋ ಕಳ್ಳರು, ಅವತ್ತು ಟಿವಿ ಸೇರಿದಂತೆ ಬಹುತೇಕ ವಸ್ತುಗಳನ್ನು ತೆಗೆದು ಇರಿಸಿದ್ದಾರೆ. ಬೀರುಗಳನ್ನು ಬಿಚ್ಚಿ ಹುಡುಕಾಡಿದ್ದಾರೆ. ಕಿಡಕಿಗಳನ್ನು ಒಡೆದು ಹಾಕಿದ್ದಾರೆ. ಇದನ್ನೆಲ್ಲ ಗಮನಿಸುತ್ತಿದ್ದ ಸಿಸಿಟಿವಿಯನ್ನೇ ಹೊತ್ತೊಯ್ದಿದ್ದಾರೆ. ಇಷ್ಟೆಲ್ಲ ಆದ್ರೂ ಇದು ಯಾವೊಂದೂ ಗಂಭೀರತೆ ಪಡೆದೇ ಇಲ್ಲ. ಯಾಕಂದ್ರೆ ಇಲ್ಲಿ ಹಣ, ಒಡವೆ ಕಳುವಾಗಿಲ್ಲವಂತೆ.

ಮಾರನೇ ದಿನವೇ ನಿರಂತರ..!
ಇನ್ನು ಹೀಗೆ ಮನೆ ಕಳ್ಳತನಕ್ಕೆ ವಿಫಲ ಯತ್ನ ನಡೆದ ದಿನ ಹಾಗೂ ಇದಾದ ಮಾರನೇ ದಿನವೇ ನಿರಂತರವಾಗಿ, ಇದೇ ಏರಿಯಾದಲ್ಲಿ ಕೇಬಲ್ ಕಳ್ಳತನವಾಗಿದೆ. ಇದಕ್ಕೂ ಮೊದಲು ಕೊಪ್ಪ ಗ್ರಾಮದ ಗಂಗಾಧರ್ ಹಿರೇಮಠ್, ಪಿಜಿ ತಂಗಚ್ಚನ್, ಸುಜಾತಾ ಪಾಣತ್ರಿಯಲ್, ಜಿ ಜಿ ತೋಮಸ್, ನಿಂಗಪ್ಪ ಕುರುಬರ, ನಿಂಗಪ್ಪ ಶಿಂಬ್ರಿ, ಮಾಳೇಶ್ ಚಿಂತಾಮಣಿ, ಗದಗಯ್ಯ ಹಿರೇಮಠ್, ಬಸ್ಸವ್ವ ಹಳೆಮನಿ, ಪರಮೇಶ್ ಸುಣಗಾರ, ಮುದಕಪ್ಪ ಓಣಿಕೆರಿ, ಜಗದೀಶ್ ಕುರಡೇಕರ್, ಮೈಲಾರಿ ಹೊಸಕೊಪ್ಪಾ, ಪರಮೇಶ್ವರ್ ಓಣಿಕೇರಿ ಎಂಬುವ ರೈತರ ಕೇಬಲ್ ಗಳು ಕಳ್ಳರ ಪಾಲಾಗಿವೆ‌.

ಅಂದಹಾಗೆ, ಇವು ನಮ್ಮ ಗಮನಕ್ಕೆ ಬಂದಿರೋದು ಮಾತ್ರ, ಇದರ ಹೊರತಾಗಿಯೂ ಸಾಕಷ್ಟು ರೈತರ ಕೇಬಲ್ ಕಳ್ಳತನವಾಗಿದೆ. ದುರಂತ ಅಂದ್ರೆ, ಅವ್ರೇಲ್ಲ ಪೊಲೀಸರಿಗೆ ಕಂಪ್ಲೆಂಟ್ ಕೊಡೋಕೆ ಹೋಗಿಲ್ಲ. ಯಾಕ್ರಿ ಕೊಟ್ಟಿಲ್ಲ..? ಅಂತಾ ಕೇಳಿದ್ರೆ ಅಯ್ಯೋ ಬಿಡ್ರಿ, ಆ ಪೊಲೀಸ್ರು ಕಂಪ್ಲೆಂಟು ತಕೊಂಡು ಯಾವ ಕಳ್ಳನನ್ನ ಹಿಡಿದಿದ್ದಾರೆ..? ಅಂತಾ ಪ್ರಶ್ನಿಸ್ತಿದಾರೆ. ಒಟ್ನಲ್ಲಿ ಇಲ್ಲಿನ ರೈತರು ಪೊಲೀಸರ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ.

ನೂತನ ಕ್ರೈಂ ಪಿಎಸ್ಐ ಮೇಲೆ ಭರವಸೆ.!
ಇಷ್ಟು, ದಿನ ಕೇಬಲ್ ಕಳ್ಳತನವಾದಾಗ ಸಾಕಷ್ಟು ಬಾರಿ ಪೊಲೀಸರಿಗೆ ದೂರು ನೀಡಲಾಗಿದೆ. ಅಷ್ಟೆ, ಆದ್ರೆ ಇದುವರೆಗೂ ಏನೂ ನಡೆದೇ ಇಲ್ಲ. ಯಾವೊಬ್ಬ ಕಳ್ಳನೂ ಮುಂಡಗೋಡ ಪೊಲೀಸರ ಕೈಗೆ ಸಿಕ್ಕಿಲ್ಲ. ಹೀಗಾಗಿ, ಸದ್ಯ ಕೊಪ್ಪ ಹಾಗೂ ಮುಂಡಗೋಡ ತಾಲೂಕಿ‌ನ ರೈತರು ಮುಂಡಗೋಡ ಠಾಣೆಗೆ ಹೊಸತಾಗಿ ಬಂದಿರೋ ಕ್ರೈಂ ಪಿಎಸ್ಐ ಸಾಹೇಬ್ರ ಮೇಲೆ ಅದೇಂತದ್ದೊ ನಂಬಿಕೆ ಇಟ್ಕೊಂಡು ಕೂತಿದಾರೆ. ದಯವಿಟ್ಟು, ಈಗಲಾದ್ರೂ ಅನ್ನದಾತನ ನಿದ್ದೆಗೆಡಿಸಿರೋ ಕೇಬಲ್‌ ಕಳ್ಳರು ಅಂದರ್ ಆಗ್ತಾರಾ..? ಕೇಬಲ್‌ ಕಳ್ಳತನ ನಿಲ್ಲತ್ತಾ..? ಕಾದು ನೋಡಬೇಕಿದೆ.

error: Content is protected !!