ಮುಂಡಗೋಡ ಠಾಣೆಗೆ ವಿನೋದ್ ರೆಡ್ಡಿ ನೂತನ ಕ್ರೈಂ PSI, ನಿರೀಕ್ಷೆಗಳು ಒಂದಾ, ಎರಡಾ..?

ಮುಂಡಗೋಡ ಪೊಲೀಸ್ ಠಾಣೆಯ ಕ್ರೈಂ ಪಿಎಸ್ಐ ಆಗಿ ವಿನೋದ್ ರೆಡ್ಡಿ ಚಾರ್ಜ್ ತಕ್ಕೊಂಡು ನಾಲ್ಕೈದು ದಿನ ಆಗಿದೆ. ನಮ್ಮ ಹನ್ಮಂತ್ ಗುಡುಗುಂಟಿಯವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬಹುತೇಕ ನಿರೀಕ್ಷೆಯಂತೆಯೇ ರೆಡ್ಡಿ ಸಾಹೇಬ್ರು ಬಂದು ಕೂತಿದ್ದಾರೆ. ನಿಜ ಅಂದ್ರೆ, ಸದ್ಯಕ್ಕಂತೂ, ಪಕ್ಕಾ ಎನರ್ಜೆಟಿಕ್ ಆಗಿರೋ ಹೊಸ ಕ್ರೈಂ ಪಿಎಸ್ಐ, ತಾಲೂಕಿನ ಕ್ರೈಮು ಗಳಿಗೆ ಕಡಿವಾಣ ಹಾಕಲು ಉತ್ಸುಕರಾದಂತೆ ಕಾಣ್ತಿದಾರೆ. ಇವ್ರು ಗಟ್ಟಿ ಹೆಜ್ಜೆ ಇಟ್ಟು ಬಂದ ಕಡೆಯಲ್ಲೇಲ್ಲಾ ಇವ್ರ ಪರವಾಗಿ ಒಂದಿಷ್ಟು ಒಳ್ಳೆಯ ಮಾತುಗಳೇ ಕೇಳಿ ಬರ್ತಿವೆ. ಆದ್ರೆ, ಮುಂದೆ ಏನಿದೆಯೋ ನಂಗಂತೂ ಗೊತ್ತಿಲ್ಲ.

ನಮ್ಮ ಕ್ರೈಂ ಟೀಂ..!
ಅಸಲು, ಮುಂಡಗೋಡ ಠಾಣೆಯ ಪಡಸಾಲೆಗೆ ಹೆಜ್ಜೆ ಇಟ್ಟ ಗಳಿಗೆಯಿಂದಲೇ ಕ್ರೈಂ ಟೀಂ ನ್ನು ಬಡಿದೆಬ್ಬಿಸಿರೋ ವಿನೋದ್ ರೆಡ್ಡಿ, ಒಂದಿಷ್ಟು ನಿರೀಕ್ಷೆ ಹುಟ್ಟುವಂತೆ ಮಾಡಿರೋದು ಸತ್ಯ. ಆದ್ರೆ, ಮುಂಡಗೋಡಿನಲ್ಲಿ ಕಳೆದ ಕೆಲ ವರ್ಷಗಳಿಂದಲೇ ಕಣ್ಣಿದ್ದರೂ ಕುರುಡು, ಕಾಲಿದ್ದರೂ ನಡೆಯಲು ಆಗದ ಸ್ಥಿತಿಯಲ್ಲಿರೋ ಕ್ರೈಂ ಟೀಂ ಗೆ ಗಟ್ಟಿಯಾಗಿ ಬೆನ್ನು ತಟ್ಟುವ ಕೈಗಳ ಕೊರತೆ ಇತ್ತು. ಶಕ್ತಿ ತುಂಬುವ ಆಕ್ಸೀಜನ್ ಕೊರತೆ ಇತ್ತು. “ಜಸ್ಟ್ ನೀವು ಮಾಡ್ರೋ ನಾನ್ ಇದ್ದಿನಿ ಅನ್ನೋ ಜಾಯಮಾನದ ಒಂದು ಸಣ್ಣ “ಬೆರಳು” ಇಲ್ಲಿನ ಕ್ರೈಂ ಟೀಂನ ಹುಡುಗ್ರಿಗೆ ಬೇಕಿತ್ತು. ಒಂದರ್ಥದಲ್ಲಿ ಇತ್ತಿತ್ತಲಾಗಿ ಪಿಎಸ್ಐ ಪರಶುರಾಮ್ ಮಿರ್ಜಿಗಿ ಈ ಟೀಂ ಗೆ ಒಂದಿಷ್ಟು ಬಲ‌ ನೀಡಿದ್ರಂತೆ, ಆದ್ರೆ, ಠಾಣೆಯೊಳಗಿನ ಕೆಲ “ಅಂದರ್” ಕಿ ಬಾತ್ ಗಳು ಬಹುಶಃ ಮತ್ತೆ ಯಂಗ್ ಹುಡುಗ್ರಿಗೆ ನಿರಾಶೆ ಮೂಡಿಸಿದ್ದ ಮಾತುಗಳಿವೆ. ಅದೇಲ್ಲ ಈಗ ಮಾತಾಡೋ ಹಾಗಿಲ್ಲ ಬಿಡಿ. ಮುಂದೆ ಸಮಯ ಸಿಕ್ಕಾಗ ಹೇಳ್ತಿನಿ.

ನಿರೀಕ್ಷೆಯಿದೆ..!
ಆದ್ರೆ, ಸದ್ಯ ಕ್ರೈಂ ಟೀಂನ ಸಾರಥ್ಯ ವಹಿಸಿಕೊಂಡಿರೋ ವಿನೋದ್ ರೆಡ್ಡಿಗೆ ಹಳಿಯಾಳದ “ಹುಡಿ”ಯಲ್ಲಿ ಪಳಗಿರೋ ಅನುಭವ ಇದೆ. ರಾಮನಗರದಲ್ಲಿ “ರಾವಣ”ರ ಬೇಟೆಯಾಡಿದ ಗತ್ತು, ಗಮ್ಮತ್ತೂ ಇದೆ. ಹೀಗಾಗಿ, ಮುಂಡಗೋಡಿನ ನೆಲದಲ್ಲಿ “ರೆಡ್ಡಿ” ಸಾಹೇಬ್ರು ಕ್ರೈಂಗಳನ್ನೇಲ್ಲ ಬೇಧಿಸಿ “ವಿನೋದ” ತುಂಬ್ತಾರೆ ಅನ್ನೋ ನಂಬಿಕೆ, ನಿರೀಕ್ಷೆ ಇದೆ.

ಇದು ಸತ್ಯ..!
ಹಾಗೆ ನೋಡಿದ್ರೆ, ನಮ್ಮ ಮುಂಡಗೋಡಿನಲ್ಲಿ ಸದ್ಯ ಕ್ರೈಂ ರೇಟು ಕಳೆದ ಕೆಲ ತಿಂಗಳುಗಳಿಂದ ಹತೋಟಿಯಲ್ಲಿದೆ. ಅದ್ರಲ್ಲಿ, ನಮ್ಮ ಪಿಐ ರಂಗನಾಥ್ ಸಾಹೇಬರ ಪ್ರಭುದ್ಧತೆಯ “ನಜರು” ಒಂದೆಡೆಯಾದ್ರೆ, ಮತ್ತೋರ್ವ ಪಿಎಸ್ಐ ಪರಶುರಾಮರ “ಖದರ್ರು” ಕೆಲ ಕ್ರೈಮುಗಳ‌ ಹುಟ್ಟಡಗಿಸುವಂತೆ ಮಾಡಿದೆ. ಹೀಗಾಗಿನೇ ತಾಲೂಕು ಕೊಂಚ ತಣ್ಣಗಿದೆ. ಆದ್ರೆ, ತಾಲೂಕಿನಲ್ಲಿ ಕಳ್ಳತನಗಳಂತಹ ಪ್ರಕರಣಗಳು ನಡೆದ್ರೆ ಟ್ರೇಸ್ ಮಾಡೋದೇ ದೊಡ್ಡ ಸವಾಲು ಆಗ್ತಿದೆ. ಯಾಕಂದ್ರೆ, ಪಟ್ಟಣದ ವ್ಯಾಪ್ತಿಯಲ್ಲಿ CCTV ಗಳ ಕೊರತೆ ಇದೆ. ಪಟ್ಟಣ ಪಂಚಾಯತಿಯ ಅಧಿಕಾರಿಗಳು ದೊಡ್ಡ ಮನಸು ಮಾಡಿ, ಪಟ್ಟಣ ವ್ಯಾಪ್ತಿಯಲ್ಲಿನ CCTV ಗಳನ್ನು ಜೀವಂತ ಇರಿಸಿಬಿಟ್ಟರೆ ಸಾಕು, ಅದೇಷ್ಟೋ ಕಳ್ಳತನ ಕೇಸುಗಳು ಬಟಾಬಯಲಾಗತ್ತವೆ. ಜೊತೆಗೆ, ಕ್ರೈಂ ಟೀಮಿನ ಹುಡುಗ್ರಿಗೆ ಬಲ ತುಂಬುವ ಅವಶ್ಯಕತೆ ಇದೆ.

ಅದ್ರ ಜೊತೆ..!
ಪೊಲೀಸ್ ಠಾಣೆಯ ಅಂಗಳದಲ್ಲಿ ಕೆಲ ಅಡ್ನಾಡಿಗಳು ದಿನ ಬೆಳಗಾದ್ರೆ ಸಾಕು, ಪೊಲೀಸರ ಹೆಸ್ರಲ್ಲಿ ದಂಧೆಗಿಳಿತಿವೆ ಅನ್ನೋ ಆರೋಪಗಳಿವೆ. ಅದೇನೇ ಕೇಸಿದ್ರೂ ಸಾಹೇಬ್ರ ಜೊತೆ ಮಾತಾಡಿ ಮುಗಿಸಿಕೊಡ್ತೇನೆ ಅಂತಾ ಫಿಲ್ಡಿಗಿಳಿಯೋ ಚಾಲಾಕಿಗಳು, ಅದೇ ಸಾಹೇಬ್ರ ಹೆಸರಲ್ಲೇ ರೇಟು ಫಿಕ್ಸ್ ಮಾಡಿಕೊಂಡು ದುಂಡಗಾಗ್ತಿವೆ ಅನ್ನೊ ಆರೋಪವಿದೆ. ಇಲ್ಲಿ, ಅದ್ಯಾರದ್ದೋ‌ ಹೆಸರಲ್ಲಿ ಅದ್ಯಾರದ್ದೋ **** ಅನ್ನುವಂಗಾಗಿದೆಯಂತೆ. ಪಾಪ, ಖಾಕಿಗಳಿಗೇ ಚಳ್ಳೆ ಹಣ್ಣು ತಿನ್ನಿಸಿ ಅಂತವರ ದೋಸ್ತಿ ಹೆಸರಲ್ಲೇ ದುಂಡಗಾಗುವ ನಾಲಾಯಕರೂ ಇಲ್ಲಿ ನಿತ್ಯವೂ ಹಾಜರಾಗಿರ್ತಾರಂತೆ. ಹೀಗಾಗಿ, ವಿನೋದ ರೆಡ್ಡಿಯವರೇ ನೀವೂ ಕೂಡ ಈ ಬಗ್ಗೆ ಗಮನವಹಿಸೋ ಅವಶ್ಯಕತೆ ಇದೆ. ಅಷ್ಟೆ..!

error: Content is protected !!