ಶಿರಸಿ ನಗರ ಠಾಣೆ ಪೊಲೀಸ್ರ ಭರ್ಜರಿ ಕಾರ್ಯಾಚರಣೆ;  ಸೆಂಟ್ರಲ್ ಬಸ್‌ಸ್ಟ್ಯಾಂಡ್‌ನಲ್ಲಿ ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಖತರ್ನಾಕ ಕಳ್ಳಿ ಅಂದರ್..!

ಶಿರಸಿ ನಗರ ಠಾಣೆ ಪೊಲೀಸ್ರ ಭರ್ಜರಿ ಕಾರ್ಯಾಚರಣೆ; ಸೆಂಟ್ರಲ್ ಬಸ್‌ಸ್ಟ್ಯಾಂಡ್‌ನಲ್ಲಿ ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಖತರ್ನಾಕ ಕಳ್ಳಿ ಅಂದರ್..!

ಶಿರಸಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಗಮನ ಬೇರೆಡೆ ಹರಿಸಿ ಕಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಮಹಿಳಾ ಆರೋಪಿಯನ್ನ ಶಿರಸಿ ನಗರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹೆಡೆಮುರಿ ಕಟ್ಟಿದ್ದಾರೆ. ಬಂಧಿತಳಿಂದ ಒಟ್ಟು 9 ಲಕ್ಷ ರೂ. ಮೌಲ್ಯದ 70 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ​ಹೇಗಾಗಿತ್ತು ಕೇಸ್..! ಅಂದಹಾಗೆ, ​ದಿನಾಂಕ 03-06-2026 ರಂದು ಮಧ್ಯಾಹ್ನ ಸೌರಬ ತಾಲೂಕಿನ ಚಂದ್ರಗುತ್ತಿ ನಿವಾಸಿ ಶ್ರೀಮತಿ ಸವಿತಾ ಎಂಬುವವರು ತಮ್ಮ ಅಕ್ಕ ನಾಗರತ್ನ ಅವರಿಗೆ ಶಿರಸಿ-ಬನವಾಸಿ ಬಸ್ ಹತ್ತಿಸಲು ಶಿರಸಿ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಜನಜಂಗುಳಿಯ ಲಾಭ ಪಡೆದ ಕಳ್ಳರು, ಸವಿತಾ ಅವರ ವ್ಯಾನಿಟಿ ಬ್ಯಾಗ್‌ನ ಜಿಪ್ ತೆಗೆದು ಅದರಲ್ಲಿದ್ದ ಸ್ಟೀಲ್ ಬಾಕ್ಸ್‌ನಿಂದ ಅಂದಾಜು 1 ಲಕ್ಷ ರೂ. ಮೌಲ್ಯದ 20 ಗ್ರಾಂ ತೂಕದ ಚಿನ್ನದ ಸರ, 50 ಸಾವಿರ ರೂ. ಮೌಲ್ಯದ ಚಿನ್ನದ ಕಿವಿ ಬೆಂಡೋಲೆ, ಸರಪಳಿ, ಮಾಟಿ ಹಾಗೂ ನಗದು ಹಣ ಸೇರಿದಂತೆ ಒಟ್ಟು 1...

ಮುಂಡಗೋಡಲ್ಲಿ ಶಿರಸಿ DySp ನೇತೃತ್ವದಲ್ಲಿ ಕಾರ್ಯಾಚರಣೆ| ಮೀಟರ್ ಬಡ್ಡಿ ಕುಳಗಳು, ರೌಡಿ ಶೀಟರಗಳ‌ ಮನೆ ಸರ್ಚಿಂಗ್..! ಅಸಲು ಏನಾಗಿದೆ ಮುಂಡಗೋಡಿಗೆ..?

ಮುಂಡಗೋಡಲ್ಲಿ ಶಿರಸಿ DySp ನೇತೃತ್ವದಲ್ಲಿ ಕಾರ್ಯಾಚರಣೆ| ಮೀಟರ್ ಬಡ್ಡಿ ಕುಳಗಳು, ರೌಡಿ ಶೀಟರಗಳ‌ ಮನೆ ಸರ್ಚಿಂಗ್..! ಅಸಲು ಏನಾಗಿದೆ ಮುಂಡಗೋಡಿಗೆ..?

 ಮುಂಡಗೋಡ ತಾಲೂಕಿನಲ್ಲಿ ಅಕ್ಷರಶಃ ಗುಜರಿಗೆ ಸೇರಿದ್ದ ಕಾನೂನು ಸುವ್ಯವಸ್ಥೆ ತಹಬದಿಗೆ ಬರತ್ತಾ..? ಇಲ್ಲಿನ ಪೊಲೀಸ್ ಠಾಣೆಯ ಗೋಡೆಗಳಲ್ಲಿ ಬಣ್ಣ ಬಣ್ಣದ ಚಿತ್ತಾರಗಳೇನೋ ಮಿಂಚುತ್ತಿವೆ. ಆದ್ರೆ ಆದರಾಚೆಗೆ ಇಡೀ ತಾಲೂಕಿನಲ್ಲಿ ಸದ್ಯ ಕಾನೂನು ಸುವ್ಯವಸ್ಥೆ ಅನ್ನೋದು ಎಷ್ಟರ ಮಟ್ಟಿಗೆ ಹೊಳೆಯುತ್ತಿದೆ..? ಎಸ್ಪಿ ಸಾಹೇಬರೇ ಉತ್ತರಿಸಬೇಕು..! ಅವೇಲ್ಲ ಸ್ಮೋ”ಕಿಂಗ್” ಅಡ್ಡೆಗಳಾ..? ಅಸಲು, ಮುಂಡಗೋಡಿನಲ್ಲಿ ಹೆಜ್ಜೆಗೊಂದರಂತೆ ತಲೆ ಎತ್ತಿಕೊಂಡಿರೋ ಸಿಗರೇಟ್ ಸ್ಮೋಕಿಂಗ್ ಅಡ್ಡೆಗಳೂ ಸೇರಿದಂತೆ ಅವುಗಳಲ್ಲೆಲ್ಲ ಅದೇನೇನು ನಡೆಯುತ್ತಿದೆ..? ಅಲ್ಲಿ ನಿತ್ಯವೂ ಎಲ್ಲೆಲ್ಲಿಂದ, ಎಂತೆಂಥವರು, ಎಷ್ಟು ಜನ ಬಂದು ಏನೇನು “ಸೇದಿ” ಹೋಗ್ತಿದಾರೆ..? ಅವೇಲ್ಲ ರಾತ್ರಿ ಅದೇಷ್ಟು ಹೊತ್ತು ಎನೇನೆಲ್ಲ‌ ಮಾಡ್ತಿವೆ..? ಯಾರಂದ್ರೆ, ಯಾರಿಗೂ ಗೊತ್ತಿಲ್ಲ…! ಬಹುಶಃ, ಇದೇಲ್ಲವನ್ನು ಅರ್ಥ ಮಾಡಿಕೊಳ್ಳೊಕೆ ನಿಜಕ್ಕೂ ಮುಂಡಗೋಡಿಗೆ ಓರ್ವ ದಕ್ಷ ಖಡಕ್ ಪೊಲೀಸ್ ಅಧಿಕಾರಿಯ ಅವಶ್ಯಕತೆ ಇದೆ ಅಂತಾ ಪ್ರಜ್ಞಾವಂತರು ಹಲಬುತ್ತಿದ್ದಾರೆ. ಆದ್ರೆ ಆ ಭಾಗ್ಯ ಯಾವಾಗ ಅನ್ನೋದೇ ಸದ್ಯದ ಪ್ರಶ್ನೆ..! ನಿಜಕ್ಕೂ ಮುಂಡಗೋಡ ಪೊಲೀಸ್ ಠಾಣೆ ಅಂದ್ರೆ ಇಡೀ ಜಿಲ್ಲೆಯಲ್ಲೇ ಕೆಟ್ಟು ಖರಾಬು ಹೆಸರಾಗಿದೆ. ಹಿರಿಯ...

ಮಳಗಿ ಹೊಸ ಬಸ್ ನಿಲ್ದಾಣದ ಬಳಿ, KSRTC ಬಸ್ ನಿಂದ ಬಿದ್ದು ವಿದ್ಯಾರ್ಥಿನಿಯ ಕೈಗೆ ಗಂಭೀರ ಗಾಯ..!

ಮಳಗಿ ಹೊಸ ಬಸ್ ನಿಲ್ದಾಣದ ಬಳಿ, KSRTC ಬಸ್ ನಿಂದ ಬಿದ್ದು ವಿದ್ಯಾರ್ಥಿನಿಯ ಕೈಗೆ ಗಂಭೀರ ಗಾಯ..!

 ಮುಂಡಗೋಡ ತಾಲೂಕಿನ ಮಳಗಿ ಹೊಸ ಬಸ್ ನಿಲ್ದಾಣದ ಬಳಿ, KSRTC ಬಸ್ ನಿಂದ ಬಿದ್ದು ವಿದ್ಯಾರ್ಥಿನಿಯ ಕೈಗೆ ಗಂಭೀರ ಗಾಯವಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು KSRTC ಅಧಿಕಾರಿಗಳನ್ನು ತೀವ್ರ ತರಾಟೆಗೆ ಪಡೆದಿದ್ದಾರೆ. ಇನ್ನು, ಮಳಗಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯೂಸಿ ವಿದ್ಯಾರ್ಥಿನಿ ಮಂಜುಳಾ ವಿಠ್ಠಲ ಗಾವಡೆ ಎಂಬುವವಳೆ ಗಾಯಗೊಂಡಿರೋ ವಿದ್ಯಾರ್ಥಿನಿಯಾಗಿದ್ದಾಳೆ. ಅಸಲು, ತುಂಬಿ ತುಳುಕುತ್ತಿದ್ದ ಬಸ್ ನಲ್ಲಿ ವಿದ್ಯಾರ್ಥಿಗಳು ಹತ್ತುತ್ತಿದ್ದರು. ಈ ವೇಳೆ ವಿದ್ಯಾರ್ಥಿನಿ ಬಸ್ ನಿಂದ ಕೆಳಗೆ ಬಿದ್ದಿದ್ದಾಳೆ. ನಂತರ ಬಸ್ ಆಕೆಯ ಕೈಗೆ ತೆರೆದಿದೆ ಎನ್ನಲಾಗಿದ್ದು, ಕೈಗೆ ಗಾಯ ಆಗಿದೆ ಅಂತಾ ತಿಳಿದು ಬಂದಿದೆ. ಸದ್ಯ ಗಾಯಗೊಂಡಿರೋ ವಿದ್ಯಾರ್ಥಿನಿಯನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿತ್ಯವೂ ಇದೇ ಗೋಳು..! ನಿಜ ಅಂದ್ರೆ, ಮಳಗಿ ಪ್ರೌಢಶಾಲೆ, ಕಾಲೇಜಿಗೆ ವರುವ ಸುತ್ತ ಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳು ಅಕ್ಷರಶಃ ಆತಂಕದಲ್ಲಿದ್ದಾರೆ. ಈ ವಿದ್ಯಾರ್ಥಿಗಳು ನಿತ್ಯವೂ ಬಸ್ ನಲ್ಲಿ ಜೋತು ಬಿದ್ದೇ ಹೋಗುವ...

ಮುಂಡಗೋಡಿನಲ್ಲಿ ಮತ್ತೊಂದು ಲೋಕಾ ದಾಳಿ, ಲಂಚ ಪಡೆಯುತ್ತಿದ್ದ ಕಂದಾಯ ನಿರೀಕ್ಷಕ (RI)ಲೋಕಾ ಬಲೆಗೆ..!

ಮುಂಡಗೋಡಿನಲ್ಲಿ ಮತ್ತೊಂದು ಲೋಕಾ ದಾಳಿ, ಲಂಚ ಪಡೆಯುತ್ತಿದ್ದ ಕಂದಾಯ ನಿರೀಕ್ಷಕ (RI)ಲೋಕಾ ಬಲೆಗೆ..!

ಮುಂಡಗೋಡಿನಲ್ಲಿ ಮತ್ತೊಂದು ಲೋಕಾಯುಕ್ತ ದಾಳಿ ನಡೆದಿದೆ. ಮುಂಡಗೋಡಿನ ಕಂದಾಯ ನಿರೀಕ್ಷಕ ಲೋಕಾ ಬಲೆಗೆ ಬಿದ್ದಿದ್ದಾರೆ. ಬಸವರಾಜ್ ಬಿಸನಾಳ ಎಂಬುವವರೇ ಲೋಕಾ ಬಲೆಗೆ ಬಿದ್ದಿದ್ದು, 15 ಸಾವಿರ ರೂ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ನಾರಾಯಣ ರಾಮಣ್ಣ ಅರೆಜೋಗಿ ಎಂಬುವ ರೈತ ನೀಡಿದ ದೂರಿನನ್ವಯ ದಾಳಿ ನಡೆದಿದೆ. ಫಾರ್ಮ ಹೌಸ್ ಗೆ ಅನುಮತಿ ನೀಡಲು ಲಂಚ ಕೇಳಿದ್ದರಂತೆ ಕಂದಾಯ ನೀರಿಕ್ಷಕ. ಹೀಗಾಗಿ, ರೈತ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಪರಿಣಾಮ ಇಂದು ದಾಳಿ ಮಾಡಿರೋ ಲೋಕಾ ಅಧಿಕಾರಿಗಳು ಇಬ್ಬರು ಅಧಿಕಾರಿಗಳ ಹೆಡೆಮುರಿ ಕಟ್ಟಿದ್ದಾರೆ‌. ಮೂರು ತಂಡಗಳಲ್ಲಿ ದಾಳಿ ಮಾಡಿರೋ ಲೋಕಾ ಅಧಿಕಾರಿಗಳು, ಕಾರವಾರ ಎಸ್ಪಿ ಕುಮಾರ ಚಂದ್ರ ಮಾರ್ಗದರ್ಶನದಲ್ಲಿ ಲೋಕಾ ಡಿವೈಎಸ್ಪಿ ಧನ್ಯಾ ನಾಯ್ಕ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

ಮುಂಡಗೋಡ ಹೆಸ್ಕಾಂ AEE ಧರ್ಮರಾಜ್ ಬೆಡಸಗಾಂವ್ ಲೋಕಾಯುಕ್ತ ಬಲೆಗೆ..! 65 ಸಾವಿರ ಲಂಚ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕ ಅಧಿಕಾರಿ..!!

ಮುಂಡಗೋಡ ಹೆಸ್ಕಾಂ AEE ಧರ್ಮರಾಜ್ ಬೆಡಸಗಾಂವ್ ಲೋಕಾಯುಕ್ತ ಬಲೆಗೆ..! 65 ಸಾವಿರ ಲಂಚ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕ ಅಧಿಕಾರಿ..!!

 ಮುಂಡಗೋಡಿನ ಹೆಸ್ಕಾಂ ನ AEE ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. 65 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿಯೇ ಲೋಕಾಯುಕ್ತ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ. ಕಾರವಾರ ಹಾಗೂ ಧಾರವಾಡ ಲೋಕಾಯುಕ್ತ ಅಧಿಕಾರಿಗಳ ಎರಡು ತಂಡ ಕಾರ್ಯಾಚರಣೆ ನಡೆಸಿದೆ. ಮುಂಡಗೋಡಿನ ಹೆಸ್ಕಾಂ ಉಪವಿಭಾಗದ AEE ಧರ್ಮರಾಜ ಬೆಡಸಗಾಂವ್ ಎಂಬುವವರೇ ಲೋಕಾ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ಮುಂಡಗೋಡಿನ ವಿದ್ಯುತ್ ಗುತ್ತಿಗೆದಾರ ಶಿವಯೋಗಿ ಕೂಡಲಮಠ ನೀಡಿದ ದೂರಿನ ಮೇರೆಗೆ ದಾಳಿಗೆ ಇಳಿದಿದ್ದ ಲೋಕಾ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಲಕ್ಷ ಲಕ್ಷ ಲಂಚ ಬೇಕಂತೆ..! ಅಂದಹಾಗೆ, ಮುಂಡಗೋಡಿನ ಬಿಸಿಎಂ ಹಾಸ್ಟೆಲ್ ನ ವಿದ್ಯುತ್ ಕಾಮಗಾರಿಯ ಸಂಬಂಧವಾಗಿ ಹಾಗೂ ಇನ್ನಿತರ ಹಲವು ಕಾಮಗಾರಿಗಳನ್ನು ನೀಡುವ ಸಲುವಾಗಿ ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ AEE ಧರ್ಮರಾಜ್ ಬೆಡಸಗಾಂವ್ ಮುಂಗಡ ಹಣವಾಗಿ 65 ಸಾವಿರ ರೂ. ಪಡೆಯುತ್ತಿದ್ದಾಗ ತಮ್ಮ ಕಚೇರಿಯಲ್ಲೇ ಲೋಕಾ ಖೆಡ್ಡಾಕ್ಕೆ ಬಿದ್ದಿದ್ದಾರೆ‌.  ಕಾರವಾರ ಲೋಕಾಯುಕ್ತ, ಧಾರವಾಡ ಲೋಕಾಯುಕ್ತ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆದಿದೆ.

ವಿದ್ಯಾರ್ಥಿಗಳಿಗೆ ಭಾರೀ ಶುಭಸುದ್ದಿ ನೀಡಿದ ನೂತನ ಸಿಎಂ ಡಿಕೆಶಿ..! ಇನ್ಮುಂದೆ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಪ್ರೀ..!

ವಿದ್ಯಾರ್ಥಿಗಳಿಗೆ ಭಾರೀ ಶುಭಸುದ್ದಿ ನೀಡಿದ ನೂತನ ಸಿಎಂ ಡಿಕೆಶಿ..! ಇನ್ಮುಂದೆ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಪ್ರೀ..!

ಇಂದು ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ‌. ತಮ್ಮ‌ ಚೊಚ್ಚಲ ಕ್ಯಾಬಿನೆಟ್ ಮೀಟಿಂಗನಲ್ಲೇ ವಿದ್ಯಾರ್ಥಿಗಳಿಗೆ ಶುಭಸುದ್ದಿ ನೀಡಿದ್ದು ವಿದ್ಯಾರ್ಥಿ ಸಾರಥಿ ಯೋಜನೆ ಜಾರಿ‌ಮಾಡಿದ್ದಾರೆ. ಇದರ ಅನ್ವಯ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಬಸ್ ಪಾಸ್ ಪ್ರೀ ಘೋಷಣೆ ಮಾಡಿದ್ದಾರೆ. ಏನಿದು ಯೋಜನೆ..! ನೂತನ ಸಿಎಂ ಡಿಕೆ ಶಿವಕುಮಾರ್ “ವಿದ್ಯಾರ್ಥಿ ಸಾರಥಿ” ಎಂಬ ನೂತನ ಯೋಜನೆ ಘೋಷಣೆ ಮಾಡಿದ್ದು, ಇನ್ಮುಂದೆ ಕಾಲೇಜು ವಿದ್ಯಾರ್ಥಿಗಳೇಲ್ಲರಿಗೂ ಬಸ್ ಪಾಸ್ ಪ್ರೀ ಆಗಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ಪ್ರೀ ಬಸ್ ಪಾಸ್ ಗಾಗಿ ಅರ್ಜಿ ಸಲ್ಲಿಸಬೇಕು. ಇಷ್ಟು ದಿನ ಶಕ್ತಿ ಯೋಜನೆಯಡಿ ಕೇವಲ ವಿದ್ಯಾರ್ಥಿನಿಯರಿಗೆ ಅಷ್ಟೇ ಬಸ್ ಪ್ರೀ ಇತ್ತು. ಇನ್ಮೇಲೆ ವಿದ್ಯಾರ್ಥಿ ಸಾರಥಿ ಯೋಜನೆಯಡಿ ವಿದ್ಯಾರ್ಥಿಗಳಿಗೂ ಬಸ್ ಪಾಸ್ ಪ್ರೀ ಘೋಷಣೆ ಮಾಡಿದ್ದಾರೆ. ಇದ್ರಿಂದ ಇಡೀ ರಾಜ್ಯದ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದ್ದು ಯೋಜನೆಗೆ ಭಾರೀ ಸ್ವಾಗತ ವ್ಯಕ್ತವಾಗಿದೆ.

ಮುಂಡಗೋಡ ಪೊಲೀಸ್ರ ಕಾರ್ಯಾಚರಣೆ, ಬ್ಲೂಹಿಲ್ ಹೊಟೇಲ್ ಬಳಿ ಗಾಂಜಾ ದಂಧೆ ಮಾಡುತ್ತಿದ್ದ ವ್ಯಕ್ತಿಯ ಬಂಧನ..!

ಮುಂಡಗೋಡ ಪೊಲೀಸ್ರ ಕಾರ್ಯಾಚರಣೆ, ಬ್ಲೂಹಿಲ್ ಹೊಟೇಲ್ ಬಳಿ ಗಾಂಜಾ ದಂಧೆ ಮಾಡುತ್ತಿದ್ದ ವ್ಯಕ್ತಿಯ ಬಂಧನ..!

ಮುಂಡಗೋಡ ಪಟ್ಟಣದ ಯಲ್ಲಾಪುರ ರಸ್ತೆಯ ಬ್ಲೂಹಿಲ್ ಹೋಟೆಲ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮುಂಡಗೋಡ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಯನ್ನು ಮುಂಡಗೋಡ ಪಟ್ಟಣದ ಹಳೂರು ಓಣಿ ನಿವಾಸಿ ಇಸ್ಮಾಯಿಲ್ ಬಾಬುಸಾಬ್ ಜಮಖಂಡಿ (40) ಎಂದು ಗುರುತಿಸಲಾಗಿದೆ. ​ಆರೋಪಿಯು ಹಳದಿ ಬಣ್ಣದ ಬ್ಯಾಗ್‌ನಲ್ಲಿ ಗಾಂಜಾವನ್ನು ಇಟ್ಟುಕೊಂಡು, ಯಲ್ಲಾಪುರ ರಸ್ತೆಯ ಬ್ಲೂಹಿಲ್ ಹೊಟೇಲ್ ಬಳಿ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯ ಬಳಿ ಇದ್ದ ಸುಮಾರು 25,000 ರೂ. ಮೌಲ್ಯದ 436 ಗ್ರಾಂ ತೂಕದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಅಂದಾಜು 30,000 ರೂ. ಮೌಲ್ಯದ ಬೈಕ್ ಸೇರಿದಂತೆ ಒಟ್ಟು 55,000 ರೂ. ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಉತ್ತರ ಕನ್ನಡ ಎಸ್ಪಿ ದೀಪನ್ ಎಮ್.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ, ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ ರವರ ಮಾರ್ಗದರ್ಶನದಲ್ಲಿ...

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ..!

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ..!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಕಾಂಗ್ರೆಸ್‌ ಸರ್ಕಾರದ ನಾಯಕತ್ವ ಬದಲಾವಣೆಯ ಬೆಳವಣಿಗೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯದ ಹೊರಗಿರುವ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಇಂದು ರಾತ್ರಿ ಮರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೊಂದಿಗೆ ರಾಜಭವನಕ್ಕೆ ತೆರಳಿದ ಸಿದ್ದರಾಮಯ್ಯ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭು ಶಂಕರ ಅವರಿಗೆ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದರು. ರಾಜಭವನದಲ್ಲಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ಈ ನಿರ್ಧಾರ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದರು. ನನ್ನ ರಾಜೀನಾಮೆಯನ್ನು ರಾಜ್ಯಪಾಲರ ಕಚೇರಿಗೆ ಸಲ್ಲಿಸಿದ್ದೇನೆ. ರಾಜ್ಯಪಾಲರು ಸದ್ಯ ಇಲ್ಲಿಲ್ಲ, ಅವರು ಇಂದು ರಾತ್ರಿ ಹಿಂತಿರುಗಲಿದ್ದಾರೆ. ಆದ್ದರಿಂದ ಅವರ ಕಚೇರಿಗೆ ರಾಜೀನಾಮೆ ಪತ್ರ ನೀಡಲಾಗಿದೆ. ಹೈಕಮಾಂಡ್ ಸೂಚನೆ ನೀಡಿದ ತಕ್ಷಣವೇ ನಾನು ಕೆಳಗಿಳಿಯುವುದಾಗಿ ಮೊದಲೇ ಹೇಳಿದ್ದೆ. ಅದರಂತೆ ಇಂದು ರಾಜೀನಾಮೆ ನೀಡಿದ್ದೇನೆ. ನಮ್ಮ ಪಕ್ಷವು ಪೂರ್ಣ ಬಹುಮತವನ್ನು ಹೊಂದಿರುವುದರಿಂದ, ರಾಜ್ಯಪಾಲರು ಸಂವಿಧಾನಬದ್ಧವಾಗಿ ನನ್ನ...

ಅಳ್ವೇಕೋಡಿ ಕಡಲ ತೀರದಲ್ಲಿ ಭೀಕರ ದುರಂತ: ಚಿಪ್ಪೆಕಲ್ಲು ತರಲು ಹೋಗಿದ್ದ ಒಂದೇ ಕುಟುಂಬದ 8 ಮಂದಿ ಬಲಿ, ಮೂವರು ನಾಪತ್ತೆ

ಅಳ್ವೇಕೋಡಿ ಕಡಲ ತೀರದಲ್ಲಿ ಭೀಕರ ದುರಂತ: ಚಿಪ್ಪೆಕಲ್ಲು ತರಲು ಹೋಗಿದ್ದ ಒಂದೇ ಕುಟುಂಬದ 8 ಮಂದಿ ಬಲಿ, ಮೂವರು ನಾಪತ್ತೆ

ಭಟ್ಕಳ ತಾಲೂಕಿನ ಅಳ್ವೇಕೋಡಿ ಸಮುದ್ರ ತೀರದಲ್ಲಿ ಭಾನುವಾರ ಭೀಕರ ದುರಂತ ಸಂಭವಿಸಿದ್ದು, ಒಂದೇ ಕುಟುಂಬದ ಎಂಟು ಮಂದಿ ಅಲೆಗಳ ಅಬ್ಬರಕ್ಕೆ ಕೊಚ್ಚಿಹೋಗಿ ಶೌಅಗಿದ್ದಾರೆ. ಜೊತೆಗೆ ಮೂವರು ನಾಪತ್ತೆಯಾಗಿದ್ದಾರೆ. ರಜಾದಿನದ ಹಿನ್ನೆಲೆಯಲ್ಲಿ ಒಟ್ಟು 13 ಮಂದಿ ಸೇರಿ ಸಮುದ್ರ ತೀರಕ್ಕೆ ತೆರಳಿದ್ದರು. ಈ ವೇಳೆ ಕೆಲವರು ಚಿಪ್ಪು ಸಂಗ್ರಹಿಸಲು ಸಮುದ್ರಕ್ಕೆ ಇಳಿದಾಗ, ಅಕಸ್ಮಾತ್ ಏರಿದ ದೈತ್ಯ ಅಲೆಗಳ ಸೆಳೆತಕ್ಕೆ ಸಿಲುಕಿ ಹಲವರು ನೀರಿನಲ್ಲಿ ಕಾಣೆಯಾಗಿದ್ದಾರೆ. ಈ ಅವಘಡದಲ್ಲಿ ಮೃತಪಟ್ಟ ಎಂಟು ಮಂದಿಯೂ ಒಂದೇ ಕುಟುಂಬಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ನಾಪತ್ತೆಯಾದ ಮೂವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಮೃತಪಟ್ಟವರು..! ಲಕ್ಷ್ಮಿ ಮಹಾದೇವ ನಾಯ್ಕ (42) ಪಡುಶಿರಾಲಿ ಬೆಂಗ್ರೆ, ಉಮೇಶ ನಾಯ್ಕ (30) ಶಾರದಾಹೊಳೆ, ಲಕ್ಷ್ಮಿ ನಾಯ್ಕ (30), ಲಕ್ಷ್ಮಿ ಅಣ್ಣಪ್ಪ ನಾಯ್ಕ (60), ಲಕ್ಷ್ಮಿ ಶಿವರಾಮ ನಾಯ್ಕ (49), ಜ್ಯೋತಿ ನಾಗಪ್ಪ ನಾಯ್ಕ (34), ಮಾಲತಿ ನಾಯ್ಕ (38) ಮಾಸ್ತಮ್ಮ ನಾಯ್ಕ ಘಟನೆಯಲ್ಲಿ ಮೃತಪಟ್ಟವರಾಗಿದ್ದಾರೆ. ಮೃತದೇಹಗಳಲ್ಲಿ ಆರು ಮಂದಿಯ ಶವಗಳನ್ನು ಭಟ್ಕಳ ಸರ್ಕಾರಿ...

ವಡಗಟ್ಟಾ ಗಾವಠಾಣ ಒತ್ತುವರಿ ತೆರವು ಕಾರ್ಯ ಶುರು..! ಬೇಕಾಬಿಟ್ಟಿ ಜಾಗ ಒತ್ತುವರಿ ಮಾಡಿಕೊಂಡಿದ್ದವರಿಗೆ ಶಾಕ್

ವಡಗಟ್ಟಾ ಗಾವಠಾಣ ಒತ್ತುವರಿ ತೆರವು ಕಾರ್ಯ ಶುರು..! ಬೇಕಾಬಿಟ್ಟಿ ಜಾಗ ಒತ್ತುವರಿ ಮಾಡಿಕೊಂಡಿದ್ದವರಿಗೆ ಶಾಕ್

ಮುಂಡಗೋಡ ತಾಲೂಕಿನ ಬಾಚಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಡಗಟ್ಟಾದಲ್ಲಿ ಗಾವಠಾಣ ಜಾಗ ಅನ್ನೋದು ಕಂಡವರ ಪಾಲಾಗಿದೆ. ಇಲ್ಲಿ ಎಕರೇಗಟ್ಟಲೇ ಬೇಕಾಬಿಟ್ಟಿಯಾಗಿ ಜಾಗ ಕಬಳಿಸಿಕೊಂಡು ಕೆಲವ್ರು ಮುಕ್ಕಾಂ ಹೂಡಿದ್ದಾರೆ. ಹೀಗಾಗಿ, ಸಂಬಂಧ ಪಟ್ಟ ಅಧಿಕಾರಿಗಳು ಈಗ ಎಚ್ಚರಗೊಂಡಿದ್ದಾರೆ. ವಡಗಟ್ಟಾದ ಗಾವಠಾಣ ಜಾಗದಲ್ಲಿನ ಒತ್ತುವರಿ ತೆರವು ಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇವತ್ತು..! ಅಂದಹಾಗೆ, ಇವತ್ತು ಮಂಗಳವಾರ ಮುಂಡಗೋಡ ತಾಲೂಕಾ ಪಂಚಾಯತಿ ಇಒ ಟಿ.ವೈ ದಾಸನಕೊಪ್ಪ ನೇತ್ರತ್ವದಲ್ಲಿ ಅಧಿಕಾರಿಗಳು,ಸಿಬ್ಬಂದಿಗಳ ತಂಡ ವಡಗಟ್ಟಾ ಗ್ರಾಮದ ಗಾವಠಾಣ ಜಾಗಕ್ಕೆ ಬಂದಿದ್ದರು. ಇಲ್ಲಿ ಮನಬಂದಂತೆ, ಬೇಕಾಬಿಟ್ಟಿಯಾಗಿ ಗಾವಠಾಣ ಜಾಗವನ್ನು ಒತ್ತುವರಿ ಮಾಡಿಕೊಂಡು ಕುಳಿತಿದ್ದವರಿಗೆ ಶಾಕ್ ನೀಡಿದ್ದಾರೆ. ಎಕೆರೆಗಟ್ಟಲೇ ಜಮೀನನ್ನು ಕಬಳಿಸಿದ್ದ ಜಾಗವನ್ನು ಖುಲ್ಲಾ ಪಡಿಸಲು ನಾಂದಿ ಹಾಡಿದ್ದಾರೆ. ಮನೆಯ ಜಾಗಗಳೋ..? ಅಸಲು, ಈ ವಡಗಟ್ಟಾ ಗ್ರಾಮದಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದಂತಹ ಸ್ಥಿತಿ ಇತ್ತು, ಬಾಚಣಕಿ ಗ್ರಾಮ‌ ಪಂಚಾಯತಿ ಬಹುಶಃ ಈ ವಡಗಟ್ಟಾ ಅನ್ನೋ ಗ್ರಾಮವೊಂದಿತ್ತು ಅನ್ನೋದನ್ನೆ ಮರೆತಂತಿತ್ತು. ಈ ಕಾರಣಕ್ಕೆ ಇಲ್ಲಿ ಹಲವರು ಬೇಕಾಬಿಟ್ಟಿಯಾಗಿ ಗಾವಠಾಣ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ....